Monday, September 16, 2024

ಪ್ರಾಯೋಗಿಕ ಆವೃತ್ತಿ

ರೌಡಿ ಅರುಣ್ ಅಲಿಯಾಸ್ ಕಪ್ಪೆ ಮೇಲಿದ್ದ ಕೇಸುಗಳೆಷ್ಟು ಗೊತ್ತಾ…!

ಮದ್ದೂರು ತಾಲೂಕಿನ ಭಾರತೀಯ ನಗರ ಸಮೀಪದ ದೊಡ್ಡರಸಿನಕೆರೆಯ ಅರುಣ್ ಅಲಿಯಾಸ್ ಕಪ್ಪೆ ಮೇಲೆ 3-4 ಕೇಸುಗಳಿವೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ಕೂಡ ತೆರೆಯಲಾಗಿತ್ತು.

24 ವರ್ಷದ ರೌಡಿಶೀಟರ್ ಅರುಣ್ ಅಲಿಯಾಸ್ ಕಪ್ಪೆ ಮೇಲೆ 2019 ರಲ್ಲಿ ಸೆಕ್ಷನ್ 307 ಅಡಿ ಕೊಲೆ ಯತ್ನ ಪ್ರಕರಣ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಈಗ ಅರುಣ್ ಕೊಲೆ ಮಾಡಿರುವ ದೇವರಾಜ್ ಎ1 ಆರೋಪಿ.

ಅಲ್ಲದೆ, ಚಿನ್ನದ ಸರ ಕಳವು ಮಾಡಿದ ಹಿನ್ನೆಲೆಯಲ್ಲಿ ರಾಬರಿ ಕೇಸ್ ಕೂಡ ದಾಖಲಾಗಿದೆ. ಕಾಲೇಜು ಹುಡುಗಿಯೊಬ್ಬಳನ್ನು ನನ್ನನ್ನು ಪ್ರೀತಿಸು, ಇಲ್ಲದಿದ್ದರೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ, ಈತನ ಮೇಲೆ ಪೋಸ್ಕೋ ಪ್ರಕರಣ ಸೇರಿದಂತೆ ಇನ್ನೂ ಒಂದು ಪ್ರಕರಣ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಇದನ್ನೂ ಓದಿ: ರೌಡಿ ಅರುಣ್ @ಕಪ್ಪೆ ಕೊಲೆ ಹಿಂದಿನ ಅಸಲಿ ಕಾರಣವೇನು ?

24 ವರ್ಷ ವಯಸ್ಸಿನ ಅರುಣ್ ಅಲಿಯಾಸ್ ಕಪ್ಪೆ ಪಾತಕಲೋಕದಲ್ಲಿ ಸಾಕಷ್ಟು ದೂರ ಹೋಗಿದ್ದ. ಈತನಲ್ಲಿರುವ ರೌಡಿ ಎಂಬ ಅಹಂ ಅವನ ಜೀವಕ್ಕೆ ಕುತ್ತು ತಂದಿದೆ. ಈತನ ಗ್ರಾಮದವರೇ ಆದ ಚಿಕ್ಕಂದಿನಿಂದ ಆಡಿ ಬೆಳೆದಿದ್ದ ಈತನ ಸ್ನೇಹಿತರು ರೌಡಿಶೀಟರ್ ಗಳಾದ ದೇವರಾಜು, ದೊಡ್ಡಯ್ಯ, ಅಭಿ, ಪುಟ್ಟಸ್ವಾಮಿ, ರಾಘವೇಂದ್ರ, ಚಂದು, ಅರವಿಂದ ಎಲ್ಲರೂ ಸೇರಿ ಅರುಣ್ ನನ್ನು ಕೊಂದು ಆರೋಪಿಗಳಾಗಿ ಜೈಲು ಸೇರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!