ವರದಿ: ಪ್ರಭು ವಿ.ಎಸ್.
ಸಾಮಾಜಮುಖಿ ಕೆಲಸಗಳಲ್ಲಿ ತೊಡಗುವುದೇ ಜಾಮೀಯಾ ಫಾರೂಕೀಯ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಗುರಿಯಾಗಿದೆ ಜಾಮಿಯಾ ಫಾರೂಕೀಯ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಮೌಲಾನ ಅಬ್ದುಲ್ ಕರೀಂ ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮದ್ದೂರು ಪಟ್ಟಣದ ಕೆ. ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ಮತ್ತು ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು
ನಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ ರಕ್ತದಾನ ಶಿಬಿರ ಏರ್ಪಡಿಸಿ ಸುಮಾರು 250 ಯುನಿಟ್ ಸಂಗ್ರಹಿಸಿ ಕೊಡಲಾಗಿತ್ತು, ಇದರ ಜೊತೆಗೆ ನೊಂದವರಿಗೆ ಸಹಾಯ ಮತ್ತು ಮುಂದಿನ ದಿನಗಳಲ್ಲಿ ಕಣ್ಣು ತಪಾಸಣೆ ಶಿಬಿರ ಏರ್ಪಡಿಸಲಾಗುವುದು. ಇದರೊಟ್ಟಿಗೆ ಅಧ್ಯಕ್ಷರ ಸಮಾಜಮುಖಿ ಸೇವೆ ಗುರುತಿಸಿ ಅವರಿಗೆ ಮದ್ದೂರು ತಾಲ್ಲೂಕು ಆಡಳಿತ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿರುವುದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಅಯೂಬ್ ಖಾನ್, ಕಾರ್ಯದರ್ಶಿ ಮಹಮದ್ ರಿಯಾಜ್. ಪದಾಧಿಕಾರಿಗಳಾದ ಸೈಯದ್ ಅಹಮದ್ ಷಾ, ಮಹಮ್ಮದ್ ನಾಸಿರ್, ಅಮೀದ್ ಖಾನ್. ಅರಫದ್ ಖಾನ್. ಖಾಸಿಂ, ಎಸ್.ಕಲೀಂ ಪಾಷಾ, ನಹೀಂ ಬೇಗ್, ಕಲೀಂ ಪಾಷಾ, ಆಶೀಫ್ ಉಲ್ಲಾ ಬೇಗ್, ಜಪ್ರುಲ್ಲಾ ಖಾನ್, ಇಬ್ರಾಹಿಂ, ಮಹಮ್ಮದ್ ಸನಾ ಉಲ್ಲಾ, ಫೈರೋಜ್ ಖಾನ್ ಸೇರಿದಂತೆ ಮತ್ತಿತರರಿದ್ದರು.