Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಗರಣದ ರೂವಾರಿ ಅದಾನಿಯ ಪರಮಸ್ನೇಹಿತ ನರೇಂದ್ರ ಮೋದಿ ಅವರಿಗೆ ಕರ್ನಾಟಕಕ್ಕೆ ಸುಸ್ವಾಗತ! : ಕಾಂಗ್ರೆಸ್ ಟ್ವೀಟ್

ಷೇರು ಮಾರುಕಟ್ಟೆಯಲ್ಲಿ ವಂಚನೆ, ಬ್ಯಾಂಕುಗಳಲ್ಲಿನ ಸಾರ್ವಜನಿಕರ ಹಣವನ್ನು ಸಾಲದ ಹೆಸರಲ್ಲಿ ಲೂಟಿ, LIC ಯಲ್ಲಿರುವ ಜನರ ಹಣಕ್ಕೆ ಪಂಗನಾಮ! ಲಕ್ಷಾಂತರ ಕೋಟಿ ಹಗರಣದ ರೂವಾರಿ ಅದಾನಿಯ ಪರಮಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕಕ್ಕೆ ಸುಸ್ವಾಗತ! ಎಂದು ಕಾಂಗ್ರೆಸ್ ಟ್ವೀಟ್ಟಿಸುವ ಮೂಲಕ ಮೋದಿ ಅವರ ಕಾಲೆಳೆದಿದೆ.

“>

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹಂಚಿಕೆಯಾದ 3% ತೆರಿಗೆಯ ಹಣವೆಲ್ಲ ಚುನಾವಣೆಗಾಗಿ ತಿಂಗಳಿಗೆ ಮೂರು ಭಾರಿ ಕರ್ನಾಟಕಕ್ಕೆ ಆಗಮಿಸುವ ಪ್ರಧಾನಿಯ ಖರ್ಚಿಗೆ ಖಾಲಿಯಾಗುವ ಸಂಭವವಿದೆ! ಕನ್ನಡಿಗರ ಬೆವರಿನ ಹಣದಲ್ಲಿ ಮೋದಿಯವರ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ, ಸಿಎಂ ಬಸವರಾಜ ಬೊಮ್ಮಾಯಿಯವರೇ, ನಿಮ್ಮ “ಅನಗತ್ಯ ವೆಚ್ಚಕ್ಕೆ ಕಡಿವಾಣ” ಘೋಷಣೆಗೆ ಇದು ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಅದಾನಿ ಕಂಪೆನಿಯಲ್ಲಿ LIC ಹೂಡಿಕೆ ಮಾಡಿದ್ದು ಈ ದೇಶದ ಜನರ ಬೆವರಿನ ಹಣ. ಅದಾನಿ ಕಂಪೆನಿಗೆ SBI ಸಾಲ ನೀಡಿದ್ದು ಈ ದೇಶದ ಜನರ ಹಣ. ದೇಶದ ಜನರ ಹಣಕ್ಕೆ ಕುತ್ತು ಬಂದಿರುವ ಈ ಸಂದರ್ಭದಲ್ಲಿ ಪ್ರಧಾನಿ ಆದವರು ಮಾತನಾಡುವ ಜವಾಬ್ದಾರಿ ಹೊಂದಿರುತ್ತಾರೆ. ಆದರೆ ನರೇಂದ್ರ ಮೋದಿಯವರೇ ಅವರು ಆ ಜವಾಬ್ದಾರಿಯನ್ನು ಮರೆತಿರುವುದೇಕೆ? ಮೌನ ಮುರಿಯುವುದೆಂದು? ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿರುವುದನ್ನು ಪ್ರಧಾನಿ ಎದುರು ಪ್ರಶ್ನಿಸುವ ಧೈರ್ಯ ತೋರುವಿರಾ? ಕರ್ನಾಟಕಕ್ಕೆ, ಕನ್ನಡಿಗರಿಗೆ ನಿರಂತರ ಅನ್ಯಾಯವೆಸಗಿದ ನರೇಂದ್ರ ಮೋದಿಯವರೆ, ಈಗ ಯಾವ ಮುಖವಿಟ್ಟುಕೊಂಡು ತಿಂಗಳಿಗೆ ಮೂರು ಭಾರಿ ರಾಜ್ಯಕ್ಕೆ ಕಾಲಿಡುವಿರಿ ಎಂದು ಪ್ರಶ್ನೆ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!