ರಸ್ತೆಯಲ್ಲಿ ನಿರ್ಮಿಸಿರುವ ಶೌಚಾಲಯ ತೆರವುಗೊಳಿಸಿ ಚರಂಡಿ ನಿರ್ಮಿಸಲು ನಿರ್ದೇಶನ ನೀಡಿದರೂ ಕ್ರಮ ವಹಿಸದ ಗಾಣದಾಳು ಪಿಡಿಒ ನಂದಿನಿ ಅವರಿಗೆ 5 ಸಾವಿರ ದಂಡ ವಿಧಿಸಿ ಜಿಪಂ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಆದೇಶಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರಾಧಿಕಾರ ಮುಖ್ಯಸ್ಥ ಕೆ.ಕರಿಯಪ್ಪ ಅವರು, ಗಾಣದಾಳು ಗ್ರಾಮದ ಸುಜಾತ ಎಂಬುವವರು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿತ್ತು ಎಂದಿದ್ದಾರೆ.
ಸ್ನಾನದ ಮನೆ ನೀರನ್ನ ಚರಂಡಿಗೆ ಬಿಡಲು ವ್ಯವಸ್ಥೆ ಇಲ್ಲ ಹಾಗೂ ಪಕ್ಕದ ಮನೆಯವರು ರಸ್ತೆಯಲ್ಲೇ ಶೌಚಾಲಯ ಗುಂಡಿ ನಿರ್ಮಿಸಿ ಚರಂಡಿ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ಕ್ರಮ ವಹಿಸಿದರಾದರೂ ಮತ್ತೆ ಸಮಸ್ಯೆ ಮಾಡಿದವರ ವಿರುದ್ದ ಕ್ರಮ ವಹಿಸಲು ಕಡೆಗಣನೆ, ನಿರಾಕರಣೆ ಹಾಗೂ ನಿಗದಿತ ಸಮಯದೊಳಗಾಗಿ ಅನುಷ್ಠಾನ ಮಾಡಲು ದುರ್ಭಾವನೆಯಿಂದ ಅಲ್ಲಗೆಳೆದಿದ್ದಾರೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.