Wednesday, September 18, 2024

ಪ್ರಾಯೋಗಿಕ ಆವೃತ್ತಿ

ಶಿವರಾಜ್ ಕುಮಾರ್ ಗೆ ಮಳವಳ್ಳಿಯಲ್ಲಿ ಅದ್ಧೂರಿ ಸ್ವಾಗತ

ವೇದ ಚಲನಚಿತ್ರ ಪ್ರಮೋಶನ್ ಮಾಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ತಂಡ ಪಟ್ಟಣದ ಮಳವಳ್ಳಿ  ಮಹಾಲಕ್ಷ್ಮಿ ಚಿತ್ರಮಂದಿರ ಆಗಮಿಸಿದ ಹಿನ್ನಲೆಯಲ್ಲಿ ಅಭಿಮಾನಿಗಳು ಅನಂತರಾಂ ವೃತ್ತದಲ್ಲಿ ಬೃಹತ್ ಗುಲಾಬಿ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು.

ಈ ವೇಳೆ ನಟ ಶಿವರಾಜ್ ಕುಮಾರ್ ಮಾತನಾಡಿ ನಿಮ್ಮ ಪ್ರೀತಿ ವಿಶ್ವಾಸ. ಅಭಿಮಾನಕ್ಕೆ ಮನಸೋತು ಇಂದು ಧನ್ಯವಾದ ಹೇಳಲು ಇಲ್ಲೆಗೆ ವೇದ ಪ್ರಮೋಷನ್ ಮಾಡುವ ಮೂಲಕ ಆಗಮಿಸಿದ್ದೇವೆ.
ಮಳವಳ್ಳಿ ಹಾಗೂ ಕೊಳ್ಳೇಗಾಲ ಅಕ್ಕಪಕ್ಕ ತಾಲ್ಲೂಕು ನಮ್ಮ‌ತಾತನ ಕಾಲದಿಂದಲೂ ಮಳವಳ್ಳಿಬಗ್ಗೆ ವಿಶ್ವಾಸ ವಿದೆ ಎಂದರು.

ಇದೇ ವೇಳೆ ನೂರಾರು ಅಭಿಮಾನಿಗಳು ಅಪ್ಪುಗೆ ಜೈಕಾರ ಕೂಗಿದರು. ಬಳಿಕ ಮಹಾಲಕ್ಷ್ಮಿ ಚಿತ್ರಮಂದಿರಕ್ಕೆ ತೆರಳಿ ಕೆಲನಿಮಿಷ ಚಲನಚಿತ್ರ ವೀಕ್ಷಿಸಿ ತೆರಳಿದರು.

ಈ ವೇಳೆ ರಾಶಿರಾಪು ಸೇನಾ ಸಮಿತಿಯ ಪದಾಧಿಕಾರಿಗಳು ಡಾ ರಾಜ್ ವಂಶದ ಅಭಿಮಾನಿದೇವರಗಳ ಸೇನಾ ಸಮಿತಿಯಿಂದ ಶಿವರಾಜ್ ಕುಮಾರ್ ಗೆ ಅಭಿನಂದಿಸಿದರು. ಈ ವೇಳೆ ನೂರಾರು ಅಭಿಮಾನಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!