ವರದಿ : ಪ್ರಭು ವಿ.ಎಸ್.
ಮದ್ದೂರು ತಾಲೂಕು ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊಳ್ಳೇಪುರ ಗ್ರಾಮದಲ್ಲಿ ನಡೆದ ಹಲ್ಲೆ ಯತ್ನ ಸಂಬಂಧ ಪುಟ್ಟಗೌರಮ್ಮ ನೀಡಿದ ದೂರಿನನ್ವಯ ವಳಗೆರೆಹಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಎಸ್.ಕೆ. ಗಿರೀಶ್ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಪುಟ್ಟಗೌರಮ್ಮ ಅವರ ಮನೆ ಬಳಿ ಧಾವಿಸಿದ ಗಿರೀಶ್ ಹಾಗೂ ಸಹಚರರು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ನಡೆಸಿ ಕೊಲೆ ಯತ್ನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಸಂಬಂಧ ಮಾ.28ರ ಮಂಗಳವಾರ ಆರೋಪಿ ಗಿರೀಶ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಈತನ ಸಹಚರರಾದ ಎಸ್.ವಿ. ದಿನೇಶ್, ಎಸ್.ವಿ. ಸಂತೋಷ್, ವೆಂಕಟೇಗೌಡ, ಎಸ್.ಕೆ. ವೆಂಕಟೇಶ, ಕಲಾವತಿ, ಎಸ್.ಪಿ. ಶಿಲ್ಪ ಅವರ ಮೇಲೆ ಪ್ರಕರಣ ದಾಖಲಾಗಿದ್ದು ಇವರ ಬಂಧನಕ್ಕೆ ಕ್ರಮವಹಿಸಲಾಗಿದೆ.