Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ವಳಗೆರೆಹಳ್ಳಿ ಗ್ರಾ.ಪಂ.ಸದಸ್ಯ ಎಸ್.ಕೆ. ಗಿರೀಶ್ ನ್ಯಾಯಾಂಗ ಬಂಧನಕ್ಕೆ

ವರದಿ : ಪ್ರಭು ವಿ.ಎಸ್.

ಮದ್ದೂರು ತಾಲೂಕು ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊಳ್ಳೇಪುರ ಗ್ರಾಮದಲ್ಲಿ ನಡೆದ ಹಲ್ಲೆ ಯತ್ನ ಸಂಬಂಧ ಪುಟ್ಟಗೌರಮ್ಮ ನೀಡಿದ ದೂರಿನನ್ವಯ ವಳಗೆರೆಹಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಎಸ್.ಕೆ. ಗಿರೀಶ್ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಪುಟ್ಟಗೌರಮ್ಮ ಅವರ ಮನೆ ಬಳಿ ಧಾವಿಸಿದ ಗಿರೀಶ್ ಹಾಗೂ ಸಹಚರರು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ನಡೆಸಿ ಕೊಲೆ ಯತ್ನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಸಂಬಂಧ ಮಾ.28ರ ಮಂಗಳವಾರ ಆರೋಪಿ ಗಿರೀಶ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಈತನ ಸಹಚರರಾದ ಎಸ್.ವಿ. ದಿನೇಶ್, ಎಸ್.ವಿ. ಸಂತೋಷ್, ವೆಂಕಟೇಗೌಡ, ಎಸ್.ಕೆ. ವೆಂಕಟೇಶ, ಕಲಾವತಿ, ಎಸ್.ಪಿ. ಶಿಲ್ಪ ಅವರ ಮೇಲೆ ಪ್ರಕರಣ ದಾಖಲಾಗಿದ್ದು ಇವರ ಬಂಧನಕ್ಕೆ ಕ್ರಮವಹಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!