ಬೆಂಗಳೂರಿನ ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ”ದಶಮುಖ ಸಾಮಾಜಿಕ ಸೇವಾ ರತ್ನ” ಪ್ರಶಸ್ತಿಗೆ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಮಂಗಲ ಆಯ್ಕೆ ಆಗಿದ್ದಾರೆ.
ಬೆಂಗಳೂರಿನ ಬಿಳೇಕನಹಳ್ಳಿಯ ವಿಜಯ ಬ್ಯಾಂಕ್ ಲೇಔಟ್ ನ ಸುಂದರಾಮ್ ಶೆಟ್ಟಿ ಹಾಲ್ ನ.26ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಲಂಕೇಶ್ ಅವರ ಸಮಾಜಸೇವಾ ಕಾರ್ಯವನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಶಮುಖ ಪತ್ರಿಕೆ ಸಂಪಾದಕ ಕೆ.ಬೊಮ್ಮೇಗೌಡ ತಿಳಿಸಿದ್ದಾರೆ.
ಲಂಕೇಶ್ ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ನೂರಾರು ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿರುವುದಲ್ಲದೇ, ವೈಯಕ್ತಿಕವಾಗಿ 61 ಭಾರಿ ರಕ್ತದಾನ ಮಾಡಿ ನೊಂದವರಿಗೆ ನೆರವಾಗಿದ್ದಾರೆ.