Thursday, September 19, 2024

ಪ್ರಾಯೋಗಿಕ ಆವೃತ್ತಿ

 “ಸದ್ದು! ವಿಚಾರಣೆ ನಡೆಯುತ್ತಿದೆ” ನ.25ಕ್ಕೆ ತೆರೆಗೆ

ಸದ್ದು! ವಿಚಾರಣೆ ನಡೆಯುತ್ತಿದೆ..ಎಂಬ ಕನ್ನಡ ಚಲನಚಿತ್ರವು ಇದೇ ನ.25ರಂದು ತೆರೆಗೆ ಬರಲಿದೆ. ಇದು ಒಂದು ಸಸ್ಪೆನ್ಸ್ ತ್ರಿಲ್ಲರ್ ಚಲನಚಿತ್ರವಾಗಿದೆ, “ಸಕಲೇಶಪುರದಲ್ಲಿ ಪ್ರೇಮಿಗಳು ಕಾಣೆಯಾಗಿ ದೊಡ್ಡ ಸುದ್ದಿಯಾಗುತ್ತದೆ, ಪೊಲೀಸ್ ಇಲಾಖೆಯು ಈ ಕೇಸ್ ನ್ನು ಪೃಥ್ವಿರಾಜ್ ಎಂಬ ದಕ್ಷ ಪೊಲೀಸ್ ಅಧಿಕಾರಿಗೆ ವಹಿಸುತ್ತದೆ, ಇದರ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ ಎಂದು ಚಿತ್ರ ತಂಡದ ಮಧುಸೂದನ್ ತಿಳಿಸಿದರು.

ಪ್ರೇಮಿಗಳ ನಾಪತ್ತೆಯ ತನಿಖೆಯು ಅನೇಕ ತಿರುವುಗಳನ್ನು ಪಡೆಯುತ್ತದೆ, ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಸಕಲೇಶಪುರ, ಮಂಗಳೂರು, ಬೆಂಗಳೂರು ಹಾಗೂ ಮೈಸೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ ಎಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಡುಗಳಿಗೆ ಪ್ರಮೋದ್ ಮರವಂತೆ, ಕಿನ್ನಾಳ್‌ ರಾಜ್, ಅಶ್ವಿನಿ ಕೆ ಎನ್ ಸಾಹಿತ್ಯ ಬರೆದಿದ್ದು, ಚಿತ್ರಕ್ಕೆ ರಘು ದೀಕ್ಷಿತ್, ರವಿ ಬಸ್ರೂರ್, ಸಚಿನ್ ಬಸ್ರೂರ್, ನವ್ಯ ಭಟ್, ಲೋಕನಾಥ್ ಸುಗುಮ್, ಪಂಚಮ್ ಜೀವಾ ಹಾಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ ಜನಮೆಚ್ಚುಗ ಪಡೆದಿದೆ, ಟ್ರೇಲರ್ ಹಾಗೂ ಹಾಡುಗಳನ್ನು ಲಹರಿ ಮ್ಯೂಸಿಕ್ ಸಂಸ್ಥೆಯ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು ಎಂದರು.

ಎಂ. ಎಂ. ಸಿನಮಾಸ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿರುವ ಚಿತ್ರವನ್ನು ಕೆ.ಆರ್.ಜಿ. ಸ್ಟುಡೀಯೋಸ್ ಬಿಡುಗಡೆ ಮಾಡಲಿದೆ, ಸುರಭಿ ಲಕ್ಷ್ಮಣ್  ನಿರ್ಮಾಪಕರಾಗಿದ್ದು, ಭಾಸ್ಕರ್ ಆರ್. ನೀನಾಸಂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ಅವರು ಕಥೆ ಬರೆದಿದ್ದು, ರಾಜ್ ಕಾಂತ್ ಛಾಯಾಗ್ರಾಹಣವಿದೆ, ಸಚಿನ್ ಬಸ್ರೂರ್ ಸಂಗೀತವಿದ್ದು, ಶಶಿಧರ್ ಪಿ. ಸಂಕಲನವಿದೆ, ತಾರಾಗಣದಲ್ಲಿ ಮಧುನಂದನ್, ರಾಕೇಶ್ ಮಯ್ಯ, ಪಾವನಾ ಗೌಡ, ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಹಂಗೀರ್ ಮತ್ತಿತರಿದ್ದಾರೆ ಎಂದರು.

ಗೋಷ್ಠಿಯಲ್ಲಿ ಚಿತ್ರದ ನಾಯಕ ರಾಕೇಶ್ ಮಯ್ಯ, ನಾಯಕಿ ಪಾವನಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!