ಪಾಂಡವಪುರ ಪಟ್ಟಣದ ಮಹಾತ್ಮಗಾಂಧಿ ಬಡಾವಣೆಯಲ್ಲಿ ಶ್ರೀ ಗಣಪತಿ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಗುದ್ದಲಿ ಪೂಜೆ ನೆರವೇರಿಸಿದರು.
ಸ್ಥಳೀಯ ವಾರ್ಡಿನ ಜೆಡಿಎಸ್ ಪಕ್ಷದ ಸದಸ್ಯ ಚಂದ್ರು ಅವರ ಮನವಿ ಮೇರೆಗೆ ಶಾಸಕರ ಅನುದಾನದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಈ ಭಾಗದ ಜನರು ಹಾಗೂ ಸದಸ್ಯರಾದ ಚಂದ್ರು ಅವರ ಒತ್ತಾಯದ ಮೇರೆಗೆ ಗಣಪತಿ ದೇವಸ್ಥಾನ ನಿರ್ಮಾಣಕ್ಕೆ ಪುರಸಭೆಯಿಂದ ಜಾಗ ಕೊಡಿಸಿ ಸುಂದರವಾಗಿ ಗಣಪತಿ ದೇವಾಲಯ ನಿರ್ಮಿಸಲಾಗುತ್ತಿದೆ ಎಂದರು.
ಜೊತೆಗೆ ವಿಶ್ವೇಶ್ವರಯ್ಯ ನಾಲೆಗೆ ಹೊಸ ಸೇತುವೆ ನಿರ್ಮಾಣ ಅನುದಾನ ಬಿಡುಗಡೆಯಾಗಿದೆ.ಕಾಮಗಾರಿ ಕೆಲಸ ಈಗಾಗಲೇ ಶುರುವಾಗಬೇಕಿತ್ತು. ಆದರೆ ರೈತರು ನೀರು ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದರಿಂದ ಕೆಲಸ ಆರಂಭವಾಗಿಲ್ಲ.ಶೀಘ್ರದಲ್ಲಿ ಸೇತುವೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಪುರಸಭೆ ಅಧ್ಯಕ್ಷ ಅರ್ಚನಾ ಚಂದ್ರು ಅವರನ್ನು ಅಭಿನಂದಿಸಲಾಯಿತು.