ಒಂದು ಟನ್ ಕಬ್ಬಿಗೆ 4,500 ರೂ.ನಿಗದಿ ಮಾಡಿ ಎಂದು ರೈತರು ಆಗ್ರಹಿಸಿದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ.
ಆದರೆ ಸರ್ಕಾರಕ್ಕೆ ಒಂದು ಟನ್ ಕಬ್ಬಿನಿಂದ 30,000 ರೂ.ಗಳಿಗೂ ಅಧಿಕ ಹಣ ಸಿಗುತ್ತದೆ. ಹೀಗಿರುವಾಗ ರೈತರಿಗೆ 4,500 ರೂ.ಕೊಡಲು ಸತಾಯಿಸುತ್ತಿರುವುದು ಸರಿಯೇ ಎಂದು ರಾಜ್ಯ ರೈತಸಂಘದ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಪ್ರಶ್ನಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಒಂದು ಟನ್ ಕಬ್ಬಿನಿಂದ ಸರ್ಕಾರಕ್ಕೆ ಜಿಎಸ್ಟಿ ರೂಪದಲ್ಲಿ 220-230 ರೂ.ಸಕ್ಕರೆಯಿಂದ 300-350 ರೂ.ಬಗಾಸ್ ನಿಂದ 250 ರೂ ಹಾಗೂ ಸ್ಪಿರಿಟ್ ಒಂದ್ ಟನ್ ನಿಂದ 10.8 ಲೀ.ಸ್ಪಿರಿಟ್ ಸಿಗುತ್ತೆ. ಅದರಿಂದ 74 ಲೀ ಮದ್ಯ ಸಿಗುತ್ತೆ.ಇದರಿಂದ 32,000 ರೂ.ಸಿಗುತ್ತದೆ. ವರ್ಷಕ್ಕೆ ಸರ್ಕಾರಕ್ಕೆ ಇದರಿಂದ 30 ಸಾವಿರ ಕೋಟಿಗೂ ಹೆಚ್ಚು ಆದಾಯವಿದೆ.
ಹೀಗೆ ಸರ್ಕಾರಕ್ಕೆ ಇಷ್ಟೆಲ್ಲ ಆದಾಯ ಇದ್ದರೂ ರೈತರಿಗೆ ಟನ್ ಕಬ್ಬಿಗೆ 4,500ರೂ. ನೀಡಲು ಸರ್ಕಾರಕ್ಕೆ ಆಗಲ್ಲವೆಂದರೆ ಹೇಗೆ? ಹೋಗಲಿ ಕೊಡಲ್ಲ ಅಂತ ಅದನ್ನಾದರೂ ಘೋಷಣೆ ಮಾಡಲಿ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹಾಗೂ ಮಧುಚಂದನ್ ಹೇಳುತ್ತಾರೆ.