ಮಂಡ್ಯದ ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೌಶಲ್ಯ ಅಭಿವೃದ್ದಿ ಕೇಂದ್ರದ ಪ್ರಾಯೋಜನೆಯಡಿಯಲ್ಲಿ ಕಬ್ಬಿನ ಬೆಳೆಯಲ್ಲಿ ಯಾಂತ್ರೀಕರಣದ ಕುರಿತು 5 ದಿನಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯು ಮಾರ್ಚ್ 6 ರಿಂದ 10ರವರೆಗೆ ನಡೆಯಲಿದ್ದು, ಆಸಕ್ತಿವುಳ್ಳ ಪರಿಶಿಷ್ಟ ಜಾತಿ ರೈತರು ಫೆಬ್ರವರಿ 28 ರೊಳಗೆ ಕಾರ್ಯಕ್ರಮ ನಿರ್ದೇಶಕರಲ್ಲಿ ನೋಂದಣೆ ಮಾಡಿಕೊಳ್ಳಬೇಕು. ಮೊದಲ 25 ಜನರಿಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ತರಬೇತಿ ಕಾರ್ಯಕ್ರಮದ ನಿರ್ದೇಶಕಿ ಡಾ.ಎಂ.ಎಸ್. ಶ್ರೀದೇವಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ.7829104070ನ್ನು ಸಂಪರ್ಕಿಸಬಹುದು.