ಶುಂಠಿ ಬೆಳೆಯುವ ಉದ್ದೇಶದಿಂದ ಪಾಂಡವಪುರ ಪಟ್ಟಣದ ಈದ್ಗಾ ಮೈದಾನದಲ್ಲಿ ಶೇಖರಣೆ ಮಾಡಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ 40ಲೋಡ್ ಕಬ್ಬಿನ ತರಗು ಬೆಂಕಿಗಾಹುತಿಯಾಗಿದೆ.
ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಪಾಂಡವಪುರ ಪಟ್ಟಣದ ತ್ಯಾಗರಾಜ ಕಾಲೋನಿಯ ನಿವಾಸಿ ಯುವ ರೈತ ದೀಪು ಎಂಬುವರಿಗೆ ಸೇರಿದ ಕಬ್ಬಿನ ತರಗು ಬೆಂಕಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಪರಿಹಾರಕ್ಕೆ ಆಗ್ರಹ
ಆಕಸ್ಮಿಕ ಬೆಂಕಿ ತಗುಲಿ 4 ಲಕ್ಷ ರೂ.ಮೌಲ್ಯದಷ್ಟು ಕಬ್ಬಿನ ತರಗು ಸುಟ್ಟು ರೈತರಿಗೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಯುವ ರೈತ ದೀಪು ಸರ್ಕಾರವನ್ನು ಒತ್ತಾಯಿಸಿದ್ದಾರೆ.