Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳೆ ಬಾರದೇ ಇದ್ದರೇ ಕುಡಿಯುವ ನೀರಿಗೆ ಏನು ಮಾಡಬೇಕು ? – ಸಂಸದೆ ಸುಮಲತಾ

ಮಳೆ ಬಾರದೇ ಇದ್ದರೇ ಕುಡಿಯುವ ನೀರಿಗೆ ಏನು ಮಾಡಬೇಕು ಗೊತ್ತಿಲ್ಲ…ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡ್ತೀದ್ದೇನೆ ಎಂದು ಸಂಸದೆ ಸುಮಲತಾ ಆತಂಕ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕೇಳಿದ್ದೇನೆ, ಮೊದಲು ಧ್ವನಿ ಎತ್ತಿದ್ದು ನಾನು, ಸರ್ಕಾರದ ಪರ ನಿಲ್ಲಲು ನಾನು ರೆಡಿ ಇದ್ದೇನೆ, ನಾನು ಎಂಪಿ ಆಗಿ ಏನು ಮಾಡಬೇಕು ಮಾಡುತ್ತಿದ್ದೇನೆ, ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಬರಿಸಬೇಕಿದೆ, ಜಿಲ್ಲೆಯ ಏಳು ತಾಲೂಕು ತೀವ್ರ ಬರ ಇದೆ, ಸರ್ಕಾರ ರೈತರ ಪರ ನಿಲ್ಲಬೇಕೆಂದು ಹೇಳಿದರು.

ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡುವ ಸಂದರ್ಭ ಇಲ್ಲ. ಕೇಂದ್ರದ ಬಳಿ‌ ಕೀ ಇದ್ದರೆ, ಈ ಹಿಂದೆ ಯಾಕೆ ಅಂಬರೀಶ್ ರಾಜೀನಾಮೆ ಕೊಡುತ್ತಿದ್ದರು. ಮಂಡ್ಯ ಜಿಲ್ಲೆಯ ಜನ ನನಗೆ ಮತ ಹಾಕಿದ್ದಾರೆ, ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಮುಂದಿನ ದಿನಗಳಲ್ಲಿ ಯೋಚನೆ ಮಾಡುವುದಿಲ್ಲ, ರಾಜೀನಾಮೆ ನೀಡಲು ಯೋಚನೆ ಮಾಡುವುದಿಲ್ಲ, ರಾಜ್ಯ ಸರ್ಕಾರದ ಮೇಲೆ ಸುಮ್ಮನೆ ಬ್ಲೇಮ್ ಮಾಡಬಾರದು ಎಂದರು.

ಕಾವೇರಿ ವಿಚಾರದಲ್ಲಿ ನಟರು ನಿಲ್ಲುತ್ತಾರೆ, ಸಿನಿಮಾ ನಟರ ಅವರ ಜವಬ್ದಾರಿ ಇದೆ, ಸುಮ್ಮನೆ ಕಾಂಟ್ರವಸ್ರಿ ಮಾಡಬಾರದು, ಮಾತನಾಡಲಿಲ್ಲ ಎಂದರೇ ಅವರು ವಿರೋಧ ಇದ್ದಾರೆ ಎಂದು ನಟರ ಮೌನದ ಬಗ್ಗೆ ಸಮರ್ಥನೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!