Friday, September 20, 2024

ಪ್ರಾಯೋಗಿಕ ಆವೃತ್ತಿ

ಮಲ್ಲಿಕಾರ್ಜುನ ಖರ್ಗೆ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ – ಸುಂಡಹಳ್ಳಿ ಮಂಜುನಾಥ್

ದೇಶದ ಅಪ್ರತಿಮ ರಾಜಕಾರಣಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ರವರಿಗೆ ಮತ್ತಷ್ಟು ಅಧಿಕಾರ ಮತ್ತು ಅವಕಾಶಗಳು ಸಿಗಲಿ ಎಂದು ಕೆಪಿಸಿಸಿ (ಪ.ಜಾತಿ ವಿಭಾಗ)ರಾಜ್ಯ ಸಂಯೋಜಕ ಸುಂಡಹಳ್ಳಿ ಮಂಜುನಾಥ್ ಹಾರೈಕೆ ಸಲ್ಲಿಸಿದರು.

ಮಂಡ್ಯ ನಗರದ ಕ್ಯಾತುಂಗೆರೆ ಬಳಿ ಇರುವ ವಿಕಸನ ಜೋಗುಳ ದತ್ತು ಕೇಂದ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 82ನೇ ಹುಟ್ಟುಹಬ್ಬದ ಅಂಗವಾಗಿ ರೈತರಿಗೆ ತೆಂಗಿನ ಗಿಡ ವಿತರಣೆ ಹಾಗೂ ಸಿಹಿ ವಿತರಣೆ ನೆರವೇರಿಸಿ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿ ಮಾತನಾಡಿದರು.

nudikarnataka.com

ಮಲ್ಲಿಕಾರ್ಜುನ ಖರ್ಗೆಯವರು ಹಳ್ಳಿಯಿಂದ ಡೆಲ್ಲಿವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿರುವ ಅವರು ಪಕ್ಷ ನಿಷ್ಠೆಗೆ ಮತ್ತೊಂದು ಹೆಸರಾಗಿರುವ ಅವರಿಗೆ ಮತ್ತಷ್ಟು ಅಧಿಕಾರ ಸಿಗಲಿ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಉಪಾಧ್ಯಕ್ಷ ಎಂ.ಡಿ.ಜಯರಾಮು, ಮುಖಂಡರಾದ ಮಹಮ್ಮದ್ ಜಬಿವುಲ್ಲ, ಜಾರ್ಜ್ ಮೋಹನ್ ಕುಮಾರ್, ಶಶಿಕಲಾ, ಕೌಡ್ಲೆ ಚನ್ನಪ್ಪ, ಸಾತನೂರು ಕೃಷ್ಣ, ಬಸವರಾಜ್, ದೇವರಾಜು ಕೊಪ್ಪ, ಲಕ್ಷ್ಮಣ್, ನರಸಿಂಹ,ನಗರಸಭೆ ಸದಸ್ಯ ಶ್ರೀಧರ್,ವಿಕಸನ ಕೇಂದ್ರದ ಮಹೇಶ್ ಚಂದ್ರಗುರು,ಕೃಷ್ಣ,ಜಬಿವುಲ್ಲಾ ಖಾನ್, ಕೇಶವಮೂರ್ತಿ,ನಾಗೇಶ್,ಅನಿಲ್, ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!