Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾರಾಗೃಹದ ಅಭಿವೃದ್ದಿಗೆ ಸಹಕರಿಸಿ : ಎಸ್.ಅಶ್ವತಿ

ಜಿಲ್ಲಾಮಟ್ಟದ ಇಲಾಖೆಗಳಿಂದ ಕಾರಾಗೃಹದ ಅಭಿವೃದ್ಧಿಗೆ ಸಿಗುವ ಅನುದಾನ, ಸೌಲಭ್ಯಗಳನ್ನು ಒದಗಿಸಿ ಕಾರಾಗೃಹದ ಅಭಿವೃದ್ದಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಅಭಿವೃದ್ದಿ ಹಾಗೂ ಸುಗಮ ಆಡಳಿತಕ್ಕೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಜಿಲ್ಲಾ ಕಾರಾಗೃಹ ಸಂದರ್ಶಕರ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರಾಗೃಹದ ಹೊರಗೋಡೆ, ಕಚೇರಿ, ಇನ್ನಿತರ ಪ್ರದೇಶಗಳ ರಿಪೇರಿ, ಕಾರಾಗೃಹ ಆವರಣದಲ್ಲಿರುವ ಬೋರ್ ವೆಲ್ ಗಳ ರೀಚಾರ್ಜ್, ಹೈ ಮಾಸ್ಕ್ ಲೈಟ್ ಅಳವಡಿಕೆ, ಕಾರಾಗೃಹದ ಸುತ್ತ ಇರುವ ಭೂಮಿಯಲ್ಲಿ ಕೃಷಿ ಚಟುವಟಿಕೆ ಕುರಿತಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಅಡುಗೆಮನೆ, ಅನಕ್ಷರಸ್ಥ ಬಂಧಿಗಳ ಕಲಿಕಾ ಕೇಂದ್ರ, ಬಂಧಿಗಳ ವೃತ್ತಿಪರ ತರಬೇತಿ ಕೇಂದ್ರ, ಗ್ರಂಥಾಲಯ, ಆಸ್ಪತ್ರೆ, ಬಂಧಿಗಳ ಸೆಲ್ ಮತ್ತು ಬ್ಯಾರಕ್ ಗಳಿಗೆ ಭೇಟಿ ನೀಡಿ ಭದ್ರತೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿ, ಜೈಲಿನ ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ ನಳಿನಿಕುಮಾರಿ, ಜಿಲ್ಲಾಕಾರಾಗೃಹ ಅಧೀಕ್ಷಕಬಟಿ. ಕೆ.ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನು ಓದಿ: ವಿಳಂಬವಾಗದಂತೆ ಕಾರ್ಯನಿರ್ವಹಿಸಿ : ಸಿಇಓ ದಿವ್ಯಪ್ರಭು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!