ರೈತನ ಜಮೀನನ್ನು ಸರ್ವೇ ಮಾಡಿ, ವರದಿ ನೀಡಲು 1 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಡ್ಯ ಎಡಿಎಲ್’ಆರ್ ಕಚೇರಿಯ ಸರ್ವೇಯರ್ ಶಿವಕುಮಾರ್ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ವ್ಯಕ್ತಿ.
ಸರ್ವೇಯರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಂಡ್ಯ ತಾಲ್ಲೂಕಿನ ಡಣಾಯಕನಪುರ ರವಿಕುಮಾರ್ ರೈತ ಲೋಕಯುಕ್ತಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಪಾಂಡವಪುರ ಬಸ್ ನಿಲ್ದಾಣದಲ್ಲಿ ರೈತನಿಂದ ಸರ್ವೇಯರ್ ಹಣ ಸ್ವೀಕರಿಸುಚಾಗ ಲೋಕಾಯುಕ್ತ ಪೊಲೀಸರು ಸರ್ವೇಯರ್ ಶಿವಕುಮಾರ್ ನನ್ನು ವಶಕ್ಕೆ ತೆಗೆದುಕೊಂಡರು.
ಈ ಕಾರ್ಯಾಚರಣೆಯಲ್ಲಿ ಮಂಡ್ಯ ಲೋಕಾಯುಕ್ತ ಎಸ್ ಪಿ ಸಜೀತ್ ನೇತೃತ್ವ ವಹಿಸಿದ್ದರು. ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ಮತ್ತು ಮೋಹನ್ ರೆಡ್ಡಿ ಸಿಬ್ಬಂದಿಗಳಾದ ಶರತ್, ಶಂಕರ್, ಮಹದೇವಸ್ವಾಮಿ ಭಾಗಿಯಾಗಿದ್ದರು.