ಬಿಜೆಪಿಯು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ, ಜನರು ಶೀಘ್ರದಲ್ಲೇ ಪ್ರತಿ ದೇವಾಲಯದಲ್ಲಿ ಬೌದ್ಧ ವಿಹಾರಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಭಾನುವಾರ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ಜುಲೈ 27ರಂದು ಅಲಹಾಬಾದ್ ಹೈಕೋರ್ಟ್ ವಾರಣಾಸಿಯ ಆಗಸ್ಟ್ 3 ರವರೆಗೆ ತಡೆ ನೀಡಿ ಆದೇಶ ಹೊರಡಿಸಿತ್ತು. ಈ ವಿಚಾರವಾಗಿಯೇ ಮೌರ್ಯ ಅವರ ಈ ಹೇಳಿಕೆಗಳು ಬಂದಿವೆ.
ಮಸೀದಿಯೊಳಗೆ ಸಮೀಕ್ಷೆ ನಡೆಸುವುದಾದರೆ ಹಿಂದೂ ದೇವಾಲಯದ ಮೊದಲು ಏನಿದೆ ಎಂಬುದನ್ನು ಸಹ ಸಮೀಕ್ಷೆ ಮಾಡಬೇಕು ಎಂದು ಮೌರ್ಯ ಹೇಳಿದ್ದರು ಎಂದು ‘ದಿ ಹಿಂದೂ’ ವರದಿ ಮಾಡಿದೆ.
प्रेस वार्ता। pic.twitter.com/bJpc4aB04o
— Swami Prasad Maurya (@SwamiPMaurya) July 30, 2023
“>
”ಈಗಿನ ಹೆಚ್ಚಿನ ಹಿಂದೂ ದೇವಾಲಯಗಳು ಮಠಗಳು ಅಥವಾ ಕಲಿಕಾ ಕೇಂದ್ರಗಳು ಈ ಹಿಂದೆ ಬೌದ್ಧ ಧಾರ್ಮಿಕ ಸ್ಥಳಗಳಾಗಿದ್ದವು ಎಂದು ನಾನು ನಂಬುತ್ತೇನೆ. ಅವುಗಳನ್ನು ಕೆಡವಿ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ” ಎಂದು ಮೌರ್ಯ ಹೇಳಿದರು.
ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳು ಏಳನೇ ಶತಮಾನ ಮತ್ತು ಎಂಟನೇ ಶತಮಾನದ ನಡುವೆ ಬೌದ್ಧ ವಿಹಾರಗಳಾಗಿದ್ದವು ಎಂದು ತೋರಿಸಲು ಪುರಾವೆಗಳಿವೆ. ಆದಾಗ್ಯೂ, ಹಿಂದೂ ವಿದ್ವಾಂಸ ಶಂಕರಾಚಾರ್ಯರು ಅವುಗಳನ್ನು ಹಿಂದೂ ದೇವಾಲಯಗಳಾಗಿ ಪರಿವರ್ತಿಸಿದರು ಎಂದು ಮೌರ್ಯ ಪ್ರತಿಪಾದಿಸಿದರು.
ಬೌದ್ಧ ವಿಹಾರಗಳನ್ನು ನೆಲಸಮಗೊಳಿಸಿ ಈ ಪುರಿಯ ಜಗನ್ನಾಥ ದೇವಾಲಯ, ಶಬರಿಮಲೆಯ ಅಯ್ಯಪ್ಪ ದೇವಾಲಯ ಮತ್ತು ಪಂಢರಪುರದ ವಿಠ್ಠಲ ದೇವಾಲಯಗಳು ಹಿಂದೂ ಧಾರ್ಮಿಕ ಮಂದಿರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಮಾಜಿ ಸಚಿವರ ಹೇಳಿಕೆಯಿಂದ ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಟೀಕೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೌರ್ಯ, ”ನಿಮ್ಮ ನಂಬಿಕೆ ನಿಮಗೆ ಮುಖ್ಯವಾದರೆ ಅವುಗಳನ್ನು ಅನುಸರಿಸುವವರಿಗೂ ನಂಬಿಕೆಗಳು ಮುಖ್ಯ. ನೀವು ನಿಮ್ಮ ಧರ್ಮದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನೀವು ಇತರ ಧರ್ಮಗಳ ಬಗ್ಗೆಯೂ ಪರಿಗಣಿಸಬೇಕು” ಎಂದು ಮೌರ್ಯ ಹೇಳಿದ್ದಾರೆ.
”ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಅವರ ಉದ್ದೇಶವಲ್ಲ, ಆದರೆ ಮಸೀದಿಗಳಲ್ಲಿ ದೇವಾಲಯಗಳನ್ನು ಹುಡಕಬೇಡಿ ಎಂದು ಹೇಳುವುದು ನನ್ನ ಉದ್ದೇಶವಾಗಿದೆ” ಎಂದು ಮೌರ್ಯ ಹೇಳಿದರು.
”ದೇವಾಲಯಗಳ ಮೇಲೆ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂಬ ಸಮರ್ಥನೆಯನ್ನು ಬೆಂಬಲಿಸಲು ಸಾಕಷ್ಟು ಪುರಾವೆಗಳಿಲ್ಲದಿರಬಹುದು, ಆದರೆ ಬೌದ್ಧ ವಿಹಾರಗಳ ಮೇಲೆ ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ತೋರಿಸಲು ಸಾಕಷ್ಟು ಪುರಾವೆಗಳಿವೆ” ಎಂದು ಅವರು ಹೇಳಿದರು.
ಮೌರ್ಯ ಅವರ ಹೇಳಿಕೆಗಳು ಹೊಸ ವಿವಾದಗಳಿಗೆ ಕಾರಣವಾಗಬಹುದು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಭಾನುವಾರ ಹೇಳಿದ್ದಾರೆ.
”ಮೌರ್ಯ ಅವರು ಬಿಜೆಪಿ ಸರ್ಕಾರದಲ್ಲಿ ಸುದೀರ್ಘ ಕಾಲ ಸಚಿವರಾಗಿದ್ದಾಗ, ಈ ವಿಷಯದಲ್ಲಿ ಪಕ್ಷ ಮತ್ತು ಸರ್ಕಾರದ ಮೇಲೆ ಏಕೆ ಅಂತಹ ಒತ್ತಡ ಹೇರಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ಇಂತಹ ಧಾರ್ಮಿಕ ವಿವಾದವನ್ನು ಸೃಷ್ಟಿಸುವುದು ಅವರ ಮತ್ತು ಸಮಾಜವಾದಿ ಪಕ್ಷದ ಅಸಹ್ಯಕರ ರಾಜಕೀಯವಾಗಿದೆ. ಬೌದ್ಧ ಮತ್ತು ಮುಸ್ಲಿಂ ಸಮಾಜಗಳು ಅವರಿಂದ ದಾರಿ ತಪ್ಪುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಸಿಂಗ್ ಚೌಧರಿ ಅವರು, ”ಮೌರ್ಯ ಅವರ ಹೇಳಿಕೆಗಳು ಹಿಂದೂ ಧರ್ಮವನ್ನು ಅವಮಾನಿಸುತ್ತಿವೆ ಮತ್ತು ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.
”ಈ ಹೇಳಿಕೆಯು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು, ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಬೇಕು ಮತ್ತು ಸಮಾಜವಾದಿ ಪಕ್ಷವು ಅದನ್ನು ಒಪ್ಪುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.