Thursday, September 19, 2024

ಪ್ರಾಯೋಗಿಕ ಆವೃತ್ತಿ

ತಹಶೀಲ್ದಾರ್ ಗೆ ಬೆದರಿಕೆ: ಮೂವರ ಮೇಲೆ ಎಫ್ಐಆರ್

ಮಂಡ್ಯ ತಹಶೀಲ್ದಾರ್ ಕುಂಇ ಅಹಮದ್ ಅವರಿಗೆ ಬೆದರಿಕೆ ಹಾಗೂ ಬ್ಲಾಕ್ ಮೇಲ್ ಮಾಡಿದ ಆರೋಪದ ಹಿನ್ನಲೆಯಲ್ಲಿ ಮೂವರ ವಿರುದ್ಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಹಣಕ್ಕಾಗಿ ಮನೆಗೆ ಬಂದು ಬ್ಲಾಕ್ ಮೇಲ್ ಮಾಡಿ ಬೆದರಿಕೆ ಹಾಕಿದ್ದಾರೆಂದು ಕಲ್ಲಹಳ್ಳಿಯ ಕೆ.ಆರ್.ರವೀಂದ್ರ, ಕಲ್ಲಹಳ್ಳಿ ಸತೀಶ್ ಹಾಗೂ ಕಿರಗಂದೂರಿನ ಎಳನೀರು ರವಿ ಎಂಬುವವರ ಮೇಲೆ ತಹಶೀಲ್ದಾರ್ ಕುಂಇ ಅಹಮದ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.

ಕೆ.ಆರ್.ರವೀಂದ್ರ ಅವರ ಸೂಚನೆಯ ಮೇರೆಗೆ ಸತೀಶ್ ಹಾಗೂ ಎಳನೀರು ರವಿ ನಮ್ಮ ಕೆಲಸಗಳನ್ನು ಮಾಡಿಕೊಡಬೇಕು. ನಮಗೆ ಹಣ ಕೊಡಬೇಕು,ಅಲ್ಲದೆ ಸತೀಶ್ ಅವರಿಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜೆರಾಕ್ಸ್ ಹಾಗೂ ಟೀ ಅಂಗಡಿ ಇಡಲು ಅವಕಾಶ ಕೊಡಬೇಕೆಂದು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆಂದು ತಹಶೀಲ್ದಾರ್ ಕುಂಇ ಅಹಮದ್ ದೂರಿನಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!