Tuesday, September 17, 2024

ಪ್ರಾಯೋಗಿಕ ಆವೃತ್ತಿ

”ಸರ್ವಾಧಿಕಾರಿ” ಮಾಧ್ಯಮಗಳನ್ನೂ ತನ್ನ ಗುಲಾಮಗಿರಿಗೆ ಒಳಪಡಿಸಿದ್ದಾನೆ: ಕಾಂಗ್ರೆಸ್

ಇದು ನಾವು ದೇಶದ ಎಲ್ಲಾ ದೊಡ್ಡ ಪತ್ರಿಕೆಗಳಿಗೆ ಕಳುಹಿಸಿದ ಪ್ರಕಟಣೆ. ಆದರೆ.. ಈ ಸತ್ಯವನ್ನು ಪ್ರಕಟಿಸುವ ಧೈರ್ಯವನ್ನು ಒಂದೇ ಒಂದು ದೊಡ್ಡ ಪತ್ರಿಕೆಯೂ ಮಾಡಲಿಲ್ಲ. ಕಾರಣ ನಿಮಗೂ ಗೊತ್ತು ‘ಸರ್ವಾಧಿಕಾರಿ’ ಮಾಧ್ಯಮಗಳನ್ನೂ ತನ್ನ ಗುಲಾಮಗಿರಿಗೆ ಒಳಪಡಿಸಿದ್ದಾನೆ. ಈಗ ಮಾಧ್ಯಮಗಳದ್ದು ಒಂದೇ ಘೋಷವಾಕ್ಯ – ‘ಮೋದಿ ಕಂಡರೆ ಮಾತ್ರ ಸುದ್ದಿ!’ ಎಂದು ಕಾಂಗ್ರೆಸ್ ಪಕ್ಷವು ವಾಗ್ದಾಳಿ ನಡೆಸಿದೆ.

ಚುನಾವಣಾ ಬಾಂಡ್ ಗಳ ಹಗರಣದಲ್ಲಿ ದಿನದಿನಕ್ಕೂ ಹೊಸ ಹೊಸ ರಹಸ್ಯಗಳು ಹೊರಬರುತ್ತಿದೆ, ಕಿಕ್ ಬ್ಯಾಕ್ ಪಡೆಯುವ ಹೊಸ ವಿಧಾನವನ್ನು ಕಂಡುಕೊಂಡಿರುವ ಬಿಜೆಪಯು ದೇಶದ ಸಂಪತ್ತನ್ನು ಪಿತ್ರಾರ್ಜಿತ ಆಸ್ತಿ ಎಂಬಂತೆ ಬಾಂಡ್ ಖರೀದಿಸಿದವರಿಗೆ ಮಾರಾಟ ಮಾಡಿದೆ. ಕಂಪೆನಿಗಳು ಅತಿ ಹೆಚ್ಚು ಹಣ ಬಿಜೆಪಿಗೆ ನೀಡಿರುವ ಹಿಂದಿನ ಕಾರಣ ಗುಟ್ಟಿನ ಸಂಗತಿ ಏನಲ್ಲ, ಪ್ರಧಾನಿ ಮೋದಿ ಈ ಚುನಾವಣಾ ಬಾಂಡ್ ಗಳನ್ನು ರಹಸ್ಯವಾಗಿಡಲು ಶ್ರಮಿಸಿದ ಕಾರಣ ಈಗ ಹೊರಬರುತ್ತಿದೆ. ಹಾಗೆಯೇ “ಪಿಎಂ ಕೇರ್ಸ್ ನಿಧಿ“ ಕೂಡ ಮತ್ತೊಂದು ಬಾಂಡ್ ಮಾದರಿಯ ಲೂಟಿಯೇ ? ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ‘ಎಕ್ಸ್’ನಲ್ಲಿ ಪ್ರಶ್ನಿಸಿದೆ.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!