ಮಂಡ್ಯನಗರದ ಮೈಷುಗರ್ ಕಾರ್ಖಾನೆ ಸಮೀಪದ ಈಜುಕೊಳದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಸಾವಿಗೀಡಾಗಿರುವ ವ್ಯಕ್ತಿ ಸುಮಾರು 30 ವರ್ಷ ವಯಸ್ಸಿನವನು ಎಂದು ಅಂದಾಜಿಸಲಾಗಿದೆ, ದೃಢಕಾಯ, ಗೋಧಿಬಣ್ಣ ಹೊಂದಿರುವ ಈತ, ಸುಮಾರು ಐದೂವರೆ ಅಡಿ ಎತ್ತರವಿದ್ದು, ಮುಖವು ಸಂಪೂರ್ಣವಾಗಿ ಜಜ್ಜಿ ಹೋಗಿರುವವುದರಿಂದ ಆತನ ಗುರುತು ಪತ್ತೆಯಾಗಿಲ್ಲ. ಮೃತನು ಬಲ ಕೈ ಮೇಲೆ kumar, sanni, ಪವನ್ ಹಾಗೂ ಹುಚ್ಚ ಎಂಬ ಹಚ್ಚೆ ಹಾಕಿಸಿಕೊಂಡಿದ್ದಾನೆ.
ಈತ ಕಪ್ಪು ಬಣ್ಣದ (adidas) ನೈಟ್ ಪ್ಯಾಂಟ್, ಬಿಳಿ ಬಣ್ಣದ ಸ್ಯಾಂಡಲ್ ಬನಿಯನ್, ಹಸಿರು ಬಣ್ಣದ ಒಳಉಡುಪು ಧರಿಸಿದ್ದಾನೆ. ಬಿಳಿ ಮತ್ತು ಕಪ್ಪು ಮಿಶ್ರಿತ ಚೆಕ್ಸ್ ಶರ್ಟ್ ಧರಿಸಿದ್ದಾನೆ. ಈತ ವಾರಸುದಾರರು ಯಾರಾದರೂ ಇದಲ್ಲಿ ಕೂಡಲೇ ಮಂಡ್ಯ ರೈಲ್ವೇ ಪೊಲೀಸರನ್ನು ಸಂಪರ್ಕಿಸಲು ತಿಳಿಸಲಾಗಿದೆ.