ಬೆಂಗಳೂರಿನ ಸದ್ಭಾವನ ಸಂಘಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಅ.9ರಂದು ಮಧ್ಯಾಹ್ನ 2.30 ಕ್ಕೆ ಮತ್ತು ಸಂಜೆ 6.30 ಗಂಟೆಗೆ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬಸ್ ಕಂಡಕ್ಟರ್-ಅಣ್ಣ ತಂದ ಅತ್ತಿಗೆ ನಾಟಕಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಮೀನುಗಾರರ ವಿಭಾಗ ಮುಖಂಡ ಬಿ.ಎಸ್.ಲೋಕೇಶ್ವರ್ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಪೌರಾಣಿಕ ರಂಗಭೂಮಿ ಕಲಾವಿದ ಸಾತನೂರು ವೆಂಕಟೇಶ್ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಹಿರಿಯ ಪೌರಾಣಿಕ ರಂಗಭೂಮಿ ಕಲಾವಿದ ಕಾಳೇನಹಳ್ಳಿ ಕಂಚೇಗೌಡ ಅಧ್ಯಕ್ಷತೆ ವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣ ವೇದಿಕೆ ಉಪಾಧ್ಯಕ್ಷ ಎಂ.ಎಸ್.ಚಿದಂಬರ್, ಜಿಲ್ಲಾಧ್ಯಕ್ಷ ಕೆ.ಟಿ. ಶಂಕರೇಗೌಡ, ಹಿರಿಯ ರಂಗಭೂಮಿ ಕಲಾವಿದರಾದ ಮಂಜುನಾಥ್ ಭೂತನಹೊಸೂರು, ಇಲಿಯಾಜ್ ತುಮಕೂರು, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಅಪ್ಪಾಜಪ್ಪ, ಛಾಯಾಗ್ರಾಹಕ ಸಂಘದ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪನ್ಯಾಸಕ ಎಸ್.ಕೆ. ರಘು ಹೊಸಕೆರೆ, ರಂಗಭೂಮಿ ಕಲಾವಿದ ಲೋಕೇಶ್ ಮಂಡ್ಯ, ವೀರಶೈವ ಲಿಂಗಾಯತ ಮಹಾಸಭಾ ಮುಖಂಡ ಟಿ.ಆರ್. ವಿರೂಪಾಕ್ಷ ಆರಾಧ್ಯ ಭಾಗವಹಿಸುವರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಎಂ.ಆರ್.ಕಪಿಲ್, ವಾರ್ತಾ ವಾಚಕ ಶಿವಮೊಗ್ಗ ಭಾಸ್ಕರ್, ಚಿತ್ರ ನಟ ಮಂಡ್ಯ ಸತ್ಯ, ಹಿರಿಯ ರಂಗಭೂಮಿ ಕಲಾವಿದ ಮಧುಪ್ರಕಾಶ್ ಮೈಸೂರು, ಗೋಪಿ ಮೈಸೂರು ಹಾಗೂ ಛಾಯಾಗ್ರಾಹಕ ಎಸ್.ಬಾಬು ನಾಗರಾಜು ಅವರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಜಯರಾಂ, ಶರಣ್ ತಾಳೂರು, ರತ್ನಾಕರ್, ಸದಾಶಿವ ಉಪಸ್ಥಿತರಿದ್ದರು.