ಪಾಂಡವಪುರ ತಾಲೂಕಿನ ಕಾಳೇನಹಳ್ಳಿ ಬಳಿ ಜಮೀನಿಗೆ ತೆರಳುತ್ತಿದ್ದ ಟ್ರಾಕ್ಟರ್ ಒಂದು ಆಕಸ್ಮಿಕವಾಗಿ ವಿಸಿ ನಾಲೆ ಟ್ರಾಕ್ಟರ್ ಪಲ್ಟಿಯಾಗಿ ರೈತನೊಬ್ಬ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಕಾಳೇನಹಳ್ಳಿ ಗ್ರಾಮದ ರೈತ ಕಾಳೇಗೌಡರ ಪುತ್ರ ನವೀನ್(34) ಮೃತ ವ್ಯಕ್ತಿ. ಜಮೀನಿನ ಉಳುಮೆ ಮಾಡುವುದಕ್ಕಾಗಿ ವಿಸಿ ನಾಲೆ ಏರಿ ಮೇಲೆ ಟ್ರಾಕ್ಟರ್ ತೆಗೆದುಕೊಂಡು ಹೋಗುವ ವೇಳೆ ಆಯತಪ್ಪಿ ಟ್ರಾಕ್ಟರ್ ಸಮೇತ ನವೀನ್ ವಿಸಿ ನಾಲೆಗೆ ಉರುಳಿ ಬಿದಿದ್ದಾನೆ. ವಿಸಿ ನಾಲೆಯ ತುಂಬ ನೀರು ಬರುತ್ತಿದ್ದ ಹಿನ್ನೆಲೆಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ.
ನಾಲೆ ತುಂಬ ನೀರು ಇದ್ದ ಹಿನ್ನೆಲೆಯಲ್ಲಿ ಮೃತ ದೇಹ ಪತ್ತೆ ಮಾಡುವುದು ಕಷ್ಟವಾದ ಹಿನ್ನೆಲೆಯಲ್ಲಿ ನಾಲೆ ನೀರನ್ನು ಕಡಿಮೆ ಪೊಲೀಸರು ನಂತರ ಮೃತ ದೇಹಕ್ಕೆ ಹುಡುಕಾಟ ನಡೆಸಿದಾಗ ಟ್ರಾಕ್ಟರ್ ಬಿದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಪೊಲೀಸರು ವಾರಸ್ಸುದಾರರಿಗೆ ಮೃತದೇಹ ಒಪ್ಪಿಸಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.