ಮಂಡ್ಯ ನಗರದ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಬೆಳಿಗ್ಗೆ 9.10 ರ ಸುಮಾರಿಗೆ ಸಂಭವಿಸಿದೆ.
ಬೆಂಗಳೂರಿನಿಂದ ಮಂಡ್ಯಕ್ಕೆ ಬಂದಿಳಿದ ಕಾಚಿಗೂಡ ರೈಲಿನಿಂದ ಇಳಿದು ಮಹಿಳೆಯರು ಮೈಸೂರಿನಿಂದ ಬರುತ್ತಿದ್ದ ಮೈಲಾಡು ತೊರೈ ರೈಲು ಬರುತ್ತಿರುವುದು ಗಮನಕ್ಕೆ ಬಾರದೆ ತರಾತುರಿಯಲ್ಲಿ ರೈಲು ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದಾರೆ.
ಇಬ್ಬರು ಮಹಿಳೆಯರಿಗೆ ಸುಮಾರು 35 ಮತ್ತು 50 ವರ್ಷವಾಗಿರಬಹುದು ಎನ್ನಲಾಗಿದೆ.,ನಿಖರ ಮಾಹಿತಿ ಇನ್ನಷ್ಟೇ ಪತ್ತೆ ಯಾಗಬೇಕಿದೆ. ಮರಣ ಹೊಂದಿದ ಮಹಿಳೆಯರಲ್ಲಿ ಒಬ್ಬರ ಹೆಸರು ಶಶಿ ಎನ್ನಲಾಗಿದೆ. ಮೃತರು ಬಸರಾಳಿನ ಪಕ್ಕದ ಊರು ಹುಳಿಜಾವಿನ ಕೊಪ್ಪಲು ಎನ್ನಲಾಗುತ್ತಿದೆ.
ಸ್ಥಳಕ್ಕೆ ರೈಲ್ವೆ ಪೋಲಿಸರು ಬಂದು ಅವರ ಬ್ಯಾಗ್ ಗಳನ್ನು ಏನಾದರೂ ಮಾಹಿತಿ ದೊರಕಬಹುದೆಂದು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಸ್ಥಳ ಮಹಜರ್ ಆಗಬೇಕಿದೆ.