ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ, ಇಂದು (ಜೂನ್ 5) ಎನ್ ಡಿಎ ಒಕ್ಕೂಟದ ಸಭೆ ಸಂಜೆ 4:00 ಗಂಟೆಗೆ ಪ್ರಧಾನಿ ನಿವಾಸದಲ್ಲಿ ಜರುಗಿದರೆ, ಇಂಡಿಯಾ ಒಕ್ಕೂಟದ ಸಭೆ ಸಂಜೆ 6:00 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದಿದೆ.
ದೆಹಲಿ ಮೂಲಗಳ ಪ್ರಕಾರ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿ ನಾಯಕರು ತಮ್ಮ ಅಭಿಪ್ರಾಯವನ್ನು ಮನಸ್ಸು ಬಿಚ್ಚಿ ಮಾತನಾಡುತ್ತಿದ್ದು ಯಾವುದೇ ಅತುರ ಇರಲಿಲ್ಲ ಎಂದು ತಿಳಿಸಿವೆ. ಆದೇ ಎನ್ ಡಿಎ ಒಕ್ಕೂಟದ ಸಭೆಯಲ್ಲಿ ಅತುರ ಗಡಿಬಿಡಿ ಮತ್ತು ಯಾರು ಸಹ ಮನಸ್ಸುಬಿಚ್ಚಿ ಮಾತನಾಡದೇ ಇರುವುದು ಎಲ್ಲಕಿಂತ ಮುಖ್ಯವಾಗಿ ಬಿಜೆಪಿ, RSS ಮತ್ತು ಎನ್ ಡಿಎ ಮಿತ್ರ ಪಕ್ಷಗಳ ನಡುವೆ ಮೋದಿಜೀ ನಾಯಕತ್ವದ ಬಗ್ಗೆ ಮನಪೂರ್ವಕ ಒಮ್ಮತ ಕಂಡುಬರುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.