ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ “ವಿಶ್ವ ಕೌಶಲ್ಯ” ದಿನದ ಅಂಗವಾಗಿ ಜುಲೈ 15 ರಂದು ಮಂಡ್ಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಬೇಕಾಗಿದ್ದ ಉದ್ಯೋಗ ಮೇಳದ ಸ್ಥಳ ಕಾರಣಾಂತರಗಳಿಂದ ಬದಲಾವಣೆಯಾಗಿದೆ. ಸದರಿ ಉದ್ಯೋಗ ಮೇಳವು ಮಂಡ್ಯ ನಗರದ ತಾವರೆಗೆರೆಯಲ್ಲಿರುವ “ಎಸ್.ಬಿ.ಸಮುದಾಯ ಭವನ” ದಲ್ಲಿ ಆಯೋಜಿಸಲಾಗಿದೆ.
ಈಗಾಗಲೇ ಉದ್ಯೋಗ ಮೇಳಕ್ಕೆ ಹೆಸರನ್ನು ನೊಂದಾಯಿಸಿಕೊಂಡಿರುವ ಹಾಗೂ ನೇರವಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ನಿರುದ್ಯೋಗ ಅಭ್ಯರ್ಥಿಗಳು ಮತ್ತು ನೋಂದಾಯಿಸಿಕೊಂಡಿರುವ ನಿಯೋಜಕರುಗಳು ಎಸ್. ಬಿ. ಸಮುದಾಯ ಭವನಕ್ಕೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ದೂ. ಸಂ: 9164642684, 8970646629 ಮತ್ತು 8660061488 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.