Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು ಮೈಸೂರು ಹೈವೇ ಕಾಮಗಾರಿ ವೇಳೆ ತಮ್ಮ ಗ್ರಾಮದಲ್ಲಿ ಕೆಳಸೇತುವೆ (ಅಂಡರ್ ಪಾಸ್) ನಿರ್ಮಿಸದೆ ತೊಂದರೆ ಉಂಟಾಗಿfದು, ಕೂಡಲೇ  ಕೆಳಸೇತುವೆ ನಿರ್ಮಿಸಲು ಆಗ್ರಹಿಸಿ ಹಳೇ ಬೂದನೂರು ಗ್ರಾಮಸ್ಥರು ಕಾಮಗಾರಿ ತಡೆದು ಪ್ರತಿಭಟನೆ ಅರಂಭಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಜಮಾವಣೆಗೊಂಡ ಗ್ರಾಮದ ಮುಖಂಡರು, ಸಾರ್ವಜನಿಕರು ಹೈವೇ ಅವೈಜ್ಞಾನಿಕ ಕಾಮಗಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪರಿಮಿತಿಯಲ್ಲಿ ಒಂದೆಡೆ ಇರುವ ಶಾಲೆ, ಗ್ರಾಮ ಪಂಚಾಯತಿ, ಡೈರಿ ಸೊಸೈಟಿಗಳಿಗೆ ತೆರಳಲು ಕಿಲೋ ಮೀಟರ್ ಗಟ್ಟಲೇ ಬಳಸಬೇಕಾದ ಅನಿವಾರ್ಯತೆ ‌ಬಂದಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಅಂಡರ್ ಪಾಸ್ ನಿರ್ಮಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಯಜಮಾನರಾದ ವಾಸುದೇವ್, ನಾಗರಾಜು, ಕೆಂಪಣ್ಣ, ಮುಖಂಡರಾದ ಬಿ.ಟಿ.ಚಂದ್ರಶೇಖರ್, ಸ್ವಾಮಿ ಮೊದಲಾದವರು ನೇತೃತ್ವ ವಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!