ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೊಡೋ ಯಾತ್ರೆಯು ದೇಶಾಧ್ಯಂತ ಸಂಚಲನ ಮೂಡಿಸುತ್ತ ಸಾಗುತ್ತಾ ಕೇರಳಾದ ಬಳಿಕ ಕರ್ನಾಟಕಕ್ಕೆ ರಾಹುಲ್ ಕಾಲಿಡಲಿದ್ದಾರೆ.
ಇದೇ ತಿಂಗಳ 29 ಮತ್ತು 30ನೇ ತಾರೀಖು ಐಕ್ಯತಾ ಯಾತ್ರೆಗೆ ಕರ್ನಾಟಕಕ್ಕೆ ಬರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವು ಸ್ವಾಗತ ಕೋರಲು ಸಿದ್ಧತೆಯಲ್ಲಿ ತೊಡಗಿದೆ.
ಅದರ ಭಾಗವಾಗಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಿದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾತ್ರೆಯ ಸಿದ್ಧತೆಯ ಬಗ್ಗೆ ಪರಿಶೀಲಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಮೈಸೂರು, ಮಂಡ್ಯ ಭಾಗದಲ್ಲಿ ಇಂದು ಭಾರತ ಐಕ್ಯತಾ ಯಾತ್ರೆಯ ಪೂರ್ವ ಸಿದ್ಧತೆಯನ್ನು ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ಆದಿಚುಂಚನಗಿರಿ ಪೀಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿರುವೆನೆಂದು ಹಂಚಿಕೊಂಡಿದ್ದಾರೆ.
ಮೈಸೂರು, ಮಂಡ್ಯ ಭಾಗದಲ್ಲಿ ಇಂದು #BharathAikyataYatre ಪೂರ್ವ ಸಿದ್ಧತೆಯನ್ನು ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ಆದಿಚುಂಚನಗಿರಿ ಪೀಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದೆ. pic.twitter.com/tIB0GPitNO
— DK Shivakumar (@DKShivakumar) September 15, 2022
ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರು ಕಾಂಗ್ರೇಸ್ ಪಕ್ಷಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಾಗಿ ಬರುವ ಪಾದಯಾತ್ರೆ ಮತ್ತೆ ರಾಜ್ಯದಲ್ಲಿ ಕೈ ಅಧಿಕಾರಕ್ಕೆ ಬರಲು ಪೂರಕವಾಗಬಹುದಾ ಎಂಬ ಲೆಕ್ಕಾಚಾರದಲ್ಲಿ ಚುನಾವಣಾ ಪಂಡಿತರು ತೊಡಗಿದ್ದಾರೆ.