Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಂಸದೆ

ಮಳವಳ್ಳಿ ಸಮೀಪದ ಬಾಚನಹಳ್ಳಿ ಗ್ರಾಮದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದೆ ಸುಮಲತಾ ಅಂಬರೀಶ್ ರವರು ಉದ್ಘಾಟಿಸಿದರು.

ತಾಲೂಕಿನ ಬಿಜಿಪುರ ಹೋಬಳಿಯ ಪಂಡಿತಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಬಾಚನಹಳ್ಳಿ ಗ್ರಾಮಕ್ಕೆ 39 ಲಕ್ಷ ರೂಗಳ ವೆಚ್ಚದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಶುದ್ಧ ನೀರಿನ ಘಟಕ ,ರಸ್ತೆ , ಚರಂಡಿ, ಕಾಮಗಾರಿಗಳ ಉದ್ಘಾಟನೆಯನ್ನು ಮಾಡಲಾಯಿತು.

ಕಾಂಗ್ರೆಸ್ ಮುಖಂಡ ಬಾಬು ಮಾತನಾಡಿ, ಗುತ್ತಿಗೆದಾರ ರಸ್ತೆಗೆ ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾಮಗಾರಿ ಮಾಡುವ ವೇಳೆ ಕಾಂಕ್ರೀಟ್ ರಸ್ತೆಗಳನ್ನು ಹಾಳು ಮಾಡಿದ್ದು ಕೂಡಲೇ ಅದನ್ನು ಸರಿಪಡಿಸುವಂತೆ ಸಂಸದರ ಗಮನಕ್ಕೆ ತಂದರು. ಕೂಡಲೇ ಗುತ್ತಿಗೆದಾರ ರಾಮೇಗೌಡರನ್ನು ಕರೆಸಿ ಹಾಳಾಗಿರುವ ಕಾಂಕ್ರೆಟ್ ರಸ್ತೆಗಳನ್ನು ಸರಿಸಿಪಡಿಸುವಂತೆ ತಾಕೀತು ಮಾಡಿದರು.

ಇದೇ ವೇಳೆ ತಹಸೀಲ್ದಾರ್ ಕೆ.ಎಸ್.ಲೋಕೇಶ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ.ಹರೀಶ್, ಪಿಡಿಒ ಎನ್.ಎಂ.ಯಶಸ್ವಿನಿ. ಗ್ರಾ.ಪಂ. ಸದಸ್ಯ ಮಹದೇವಯ್ಯ, ಮಾಜಿ ಸದಸ್ಯ ನಂಜುಂಡಸ್ವಾಮಿ, ಕಾಂಗ್ರೆಸ್ ಯುವ ಮುಖಂಡ ಅಭಿಷೇಕ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!