ಬೇರೊಬ್ಬ ವ್ಯಕ್ತಿಗೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಸಿ, ತನ್ನ ಅಣ್ಣನ ಮೂಲಕ ಕೆರೆ ಜಾಗವನ್ನು ಸಚಿವ ಚಲುವರಾಯಸ್ವಾಮಿ ದಾನವಾಗಿ ಪಡೆದಿರುವುದು ಅಕ್ರಮವಾಗಿದ್ದು, ಈ ಎಲ್ಲ ಮಾಹಿತಿಯನ್ನು ಜನರ ಮುಂದಿಡುತ್ತೇವೆಂದು ನಾಗಮಂಗಲ ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ ಶ್ರೀನಿವಾಸಯ್ಯ ಹೇಳಿದರು.
ನಾಗಮಂಗಲದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಚಲುವರಾಯಸ್ವಾಮಿ ಅವರು ಮೂರೂವರೆ ಎಕರೆ ಕೆರೆ ಜಾಗವನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿರುವ ವಿಚಾರವಾಗಿ ದಾಖಲೆ ಸಮೇತ ಸಾರ್ವಜನಿಕವಾಗಿ ಇಟ್ಟಿದ್ದೇವೆ, ಈ ನಡುವೆ ಸಚಿವ ಚಲುವರಾಯಸ್ವಾಮಿ ಮತ್ತು ಹಿಂಬಾಲಕರು ನಮ್ಮ ನಾಯಕರ ಜೆ.ಡಿ.ಎಸ್ ಪಕ್ಷದ ವರಿಷ್ಠ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಸುರೇಶಗೌಡರ ವಿರುದ್ಧ ಏಕವಚನ ಪದಪ್ರಯೋಗ ಮಾಡುತ್ತಿರುವುದು ಸರಿಯಲ್ಲ ಎಂದರು.
ಚಲುವರಾಯಸ್ವಾಮಿ ಗೆದ್ದ ನಂತರ ನಾಗಮಂಗಲ ತಾಲೂಕಿನ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿವೆ, ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳು ವಿಫಲವಾಗಿವೆ, ಅವರು ಒಬ್ಬ ಡಮ್ಮಿ ಹೋರಾಟಗಾರ, ಅವರಿಗೆ ಎಚ್ ಡಿ ಕುಮಾರಸ್ವಾಮಿ ಮತ್ತು ಹೆಚ್ಡಿ ದೇವೇಗೌಡರ ಹೆಸರೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ಮುಖಂಡ ಸಾಮಕಹಳ್ಳಿ ಯದುರಾಜು, ನಾಗತಿಹಳ್ಳಿ ರಾಮಸ್ವಾಮಿ, ಬುಲೆಟ್ ರಾಜಣ್ಣ, ಮುಳಕಟ್ಟೆ ಶಿವರಾಮಯ್ಯ, ವಿನೋದ, ಬರ್ಕತ್ ಉಲ್ಲಾ ಖಾನ್ ಹಾಜರಿದ್ದರು