Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾರಿನ ಗ್ಲಾಸ್ ಒಡೆದು ₹.4.5 ಲಕ್ಷ ಎಗರಿಸಿದ ಖದೀಮರು !

ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ಹಣ ಎಗರಿಸಿ ಖತರ್ ನಾಕ್ ಕಳ್ಳರು ಪರಾರಿಯಾಗಿರೋ
ಮಂಡ್ಯದ ನಗರಸಭೆ ಆವರಣದಲ್ಲಿ ನಿನ್ನೆ ನಡೆದಿದೆ.

ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ವ್ಯಕ್ತಿ.

ಮಂಡ್ಯ ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ ಎಸ್.ಬಿ.ಐ ಬ್ಯಾಂಕಿಗೆ ಕೆಲಸದ ನಿಮಿತ್ತ ಹೋಗಿದ್ದ ಪರಮೇಶ್, ವಾಪಸ್ ಬರುವಷ್ಟರಲ್ಲಿ ಖದೀಮರು ಕಾರಿನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಜಮೀನು ರಿಜಿಸ್ಟರ್ ಮಾಡಿಸಿ, ರಿಜಿಸ್ಟರ್ ಕಚೇರಿ ಬಳಿಯಿಂದ ಹಣ ಪಡೆದು ನಗರಸಭೆ ಬಳಿ ಬಂದು, ತನ್ನ ಬ್ರೀಜಾ ಕಾರು ನಿಲ್ಲಿಸಿದ್ದಾಗ, ಕಳ್ಳರು ಕ್ಲಾಸ್ ಒಡೆದು ಹಣ ಎಗರಿಸಿದ್ದಾರೆ. ಹಣ ಕಳೆದು ಕೊಂಡ ಪರಮೇಶ್ ಗೋಳಾಟ ಹೇಳತೀರದಾಗಿತ್ತು.

ಈ ಬಗ್ಗೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!