ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮೂರು ಬಾರಿ ಅಧಿಕಾರ ನಡೆಸಿದೆ. ಅದಾದ ನಂತರ ಒಂದು ಬಾರಿ 38, ಮತ್ತೊಮ್ಮೆ 62, ಇನ್ನೊಮ್ಮೆ 78 ಸ್ಥಾನ ಪಡೆಯಿತು. ಈ ಬಾರಿ ಅವರಿಗೆ ಗೆಲ್ಲುವ ಶಕ್ತಿ ಇರೋದು 50-70 ಸೀಟುಗಳನ್ನು ಮಾತ್ರ ಎಂದು ಮಾಜಿ ಸಿಎಂ ಹೆಚೆ.ಡಿ.ಕುಮಾರಸ್ವಾಮಿ ಹೇಳಿದರು.
ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪ್ರಾಬಲ್ಯ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ನಂಬಿಕೆ ಇಲ್ಲ ? ರಾಜ್ಯದಲ್ಲಿ ಕಾಂಗ್ರೆಸ್ಸಿಗರ ಪರಿಸ್ಥಿತಿ ನೋಡಿದ್ದಿರಾ?ಚಿನ್ನದ ತಗಡು ಹೊಡೆಸಿಕೊಂಡು ಮನೆ, ಕಚೇರಿಯಲ್ಲಿ ಹಾಕೋಳ್ಳೋಕೆ ಹೇಳಿ ? ನಿತ್ಯ ಅದನ್ನ ನೋಡಿಕೊಂಡು ಆನಂದ ಪಡಲಿ. ಪರ್ಸಂಟೇಜ್ ಗಾಗಿ ಬಿಜೆಪಿ-ಕಾಂಗ್ರೆಸ್ ಪೈಪೋಟಿ ನಡೆಸಿವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಅದು ಚುನಾವಣೆ ಗೆಲ್ಲೋಕಲ್ಲ. ಅಧಿಕಾರಕ್ಕೇ ಬಂದ್ರೆ ಎಷ್ಟು ಪರ್ಸಂಟೇಜ್ ಪಡೆಯಲಿ ಅನ್ನೋದಕ್ಕೆ ಸ್ಪರ್ಧೆ ಇರೋದು. ಇನ್ನೂ ಯಾಕೆ ಜೆಡಿಎಸ್ನ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದೀರ? ಸಂಪೂರ್ಣ ಬಹುಮತ ಬರುತ್ತೆ ಅನ್ನೋರು ಈ ರೀತಿ ಕೆಲಸ ಯಾಕೆ ಮಾಡ್ತಿದ್ದೀರ? ಎಂದು ತಿರುಗೇಟು ನೀಡಿದರು.
ಇನ್ನೂ ಕಾಂಗ್ರೆಸ್ಸಿಗರು ಜೆಡಿಎಸ್ನ ಹಲವರ ಮನೆ ಕಾಯ್ತಿದ್ದಾರೆ. ಇವತ್ತು ನಾನು ಹೇಳ್ತಿದ್ದೀನಿ ಬರೆದಿಟ್ಟುಕೊಳ್ಳಿ. ರಾಜ್ಯದಲ್ಲಿ ಜನತಾದಳದ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೆ. ನಮ್ಮ ಸರ್ಕಾರ ಬರೋದನ್ನ ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಡೆಯಲಾಗಲ್ಲ. ಮತ್ತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಇಲ್ಲ ಇಲ್ಲ ಎಂದು ಹೇಳಿದರು.