ಕರ್ನಾಟಕ ರತ್ನ,ನಟ ಸಾರ್ವಭೌಮ ಪುನೀತ್ ರಾಜ್ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ದಿನವಾದ ಇಂದು ಮಂಡ್ಯ ತಾಲ್ಲೂಕಿನ ಗೊರವಾಲೆ-ಸಂಪಹಳ್ಳಿ ಗೇಟ್ ವೃತ್ತಕ್ಕೆ ಅಪ್ಪು ಸರ್ಕಲ್ ಎಂದು ನಾಮಕರಣ ಮಾಡಲಾಯಿತು.
ಅಪ್ಪು ಹೆಸರಿಡಲು ಸಂಪಹಳ್ಳಿ ಗ್ರಾಮದ ಪುನೀತ್ ಅಭಿಮಾನಿಗಳು ನಿರ್ಧರಿಸಿ,ಅದರಂತೆ ಇಂದು
ಸಂಪಹಳ್ಳಿ ಗ್ರಾಮದ
108 ವರ್ಷದ ಚೆನ್ನಮ್ಮ ಎಂಬುವರಿಂದ ನಾಮಫಲಕ ಅನಾವರಣ ಮಾಡಿಸಿದರು.ಪುನೀತ್ ರಾಜ್ಕುಮಾರ್ ಅವರಿಗೆ ಜೈಕಾರ ಹಾಕಿ ಅಪ್ಪು ಎಂದೆಂದಿಗೂ ಅಮರ ಎಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು.