ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ ನಾಗಣ್ಣಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶನಿವಾರ ಸಂಜೆ ಭೇಟಿ ನೀಡಿದ ಅವರು ಘಟನೆಯ ಕುರಿತು ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು.
ಮಾಧ್ಯಮದೊಂದಿಗೆ ಘಟನೆಯ ಕುರಿತು ವಿವರವಾಗಿ ಮಾತನಾಡಿ, ಘಟನೆಯ ಕುರಿತು ಸರಿಯಾದ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಅನುಮಾನಕ್ಕೆ ಆಸ್ಪದವಾದ ಕೆಆರ್ಎಸ್ ಠಾಣೆ ಪೊಲೀಸರ ನಡೆ
ಸೋಮವಾರ ಮಕ್ಕಳ ರಕ್ಷಣಾ ಆಯೋಗದ ಸಭೆ ನಡೆಯಲಿದ್ದು, ಈ ವಿಷಯದ ಕುರಿತು ಪ್ರಸ್ಥಾಪಿಸಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದರು.