ಮಂಡ್ಯನಗರದ ರಸ್ತೆ ಗುಂಡಿಗೆ ಬಲಿಯಾದ ಸಾತನೂರು ಗ್ರಾಮದ ನಿವೃತ್ತ ಯೋಧ ಎಸ್.ಎನ್.ಕುಮಾರ್ ಅವರ ನಿವಾಸಕ್ಕೆ ಆಮ್ ಆದ್ಮಿ ಪಾರ್ಟಿಯ ಮುಖಂಡರು ಇಂದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಬಿಜೆಪಿ ಸರ್ಕಾರ ರಸ್ತೆ ದುರಸ್ತಿಪಡಿಸಲು ಸಂಪೂರ್ಣವಾಗಿ ವಿಫಲವಾಗಿದೆ, ಸಚಿವರು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ದೂರಿದರು.
ಪಕ್ಷದ ಜಿಲ್ಲಾ ಪದಾಧಿಕಾರಿಗಳಾದ ವಕೀಲ ಸಿ.ಎಸ್.ವೆಂಕಟೇಶ, ಬೊಮ್ಮಯ್ಯ, ಮಳವಳ್ಳಿ ಮಹದೇವಸ್ವಾಮಿ, ಮದ್ದೂರು ಶಿವರಾಮ್ ಉಪಸ್ಥಿತರಿದ್ದರು.