ನಾಗಮಂಗಲ ಪುರಸಭೆ ವ್ಯಾಪ್ತಿಯ 23ನೇ ವಾರ್ಡಿನಲ್ಲಿರುವ ಮುಸ್ಲಿಂ ಬಾಂಧವರ ಸ್ಮಶಾನದ ಸಂಪರ್ಕ ರಸ್ತೆ ಕಾಮಗಾರಿಗೆ ಸಮಾಜ ಸೇವಕ ಮಲ್ಲಿಕಾರ್ಜುನ್ (ಫೈಟರ್ ರವಿ)ಅವರು ಚಾಲನೆ ನೀಡಿದರು.
ಮುಸ್ಲಿಂ ಬಾಂಧವರು ಫೈಟರ್ ರವಿ ಅವರಲ್ಲಿ ಸ್ಮಶಾನದ ರಸ್ತೆಗೆ ಕಾಂಕ್ರೀಟ್ ಹಾಕಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಫೈಟರ್ ರವಿ ಅವರು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ರವಿ ಅವರ ಸಮಾಜ ಸೇವೆಯನ್ನು ಮೆಚ್ಚಿದ ಮುಸ್ಲಿಂ ಬಾಂಧವರು, ಇದುವರೆಗೂ ಯಾವ ಪಕ್ಷದ ಶಾಸಕರು ಮಾಡದೆ ಇರುವ ಕೆಲಸಗಳನ್ನು ತಾಲೂಕಿನಾದ್ಯಂತ ಫೈಟರ್ ರವಿ ಅವರು ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫೈಟರ್ ರವಿ ಅವರು,ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕೆಂದು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಂಟ್ರಾಕ್ಟರ್ ಮಕ್ಬುಲ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.