ಮೈಸೂರು ಅಥವಾ ಮಂಡ್ಯದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದ ಶಾಸಕ ತನ್ವೀರ್ ಸೇಠ್ ಗೆ ಹಿಂದುತ್ವ ಸಂಘಟನೆ ಕಾರ್ಯಕರ್ತನೋರ್ವ ಜೀವಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಆತ, “ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ನಾವು ವಿರೋಧಿಸುತ್ತೇವೆ. 108 ಅಡಿ ಅಲ್ಲ 1 ಅಡಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿದರೂ ನಿಮ್ಮ ಅಂತಿಮ ಯಾತ್ರೆ ಆಗುತ್ತದೆ ಎಂದು ಹೇಳುವುದಕ್ಕೆ ಇಷ್ಟ ಪಡುತ್ತೇನೆ.
ಈ ದೇಶ ಮತ್ತು ಸಮಾಜಕ್ಕೆ ಕಂಠಕವಾಗಿದ್ದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ನಾವು ವಿರೋಧಿಸುತ್ತೇವೆ. ಒಂದು ವೇಳೆ ಪ್ರತಿಮೆ ನಿರ್ಮಾಣಕ್ಕೆ ಮುಂದಾದರೆ ನಾವು ಉತ್ತರ ಕೊಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾನೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ
ತನ್ವೀರ್ ಸೇಠ್ ಅವರಿಗೆ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್, “ಮೊನ್ನೆ ಒಬ್ಬ ಬಿಜೆಪಿ ಗೂಂಡಾ ಪ್ರಿಯಾಂಕ್ ಖರ್ಗೆ ಅವರಿಗೆ ಗುಂಡು ಹೊಡೆಯುತ್ತೇನೆ ಎಂದಿದ್ದ ಇಂದು ಮತ್ತೊಬ್ಬ ಶಾಸಕ ಶಾಸಕ ತನ್ವೀರ್ ಸೇಠಗೆ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಜನಪ್ರತಿನಿಧಿಗಳಿಗೆ ಕೊಲೆ ಬೆದರಿಕೆ ಹಾಕಿ ರಾಜಾರೋಷವಾಗಿ ತಿರುಗಿಕೊಂಡಿರಲು ಸರ್ಕಾರ ಬಿಟ್ಟಿದೆ ಎಂದರೆ ಗೃಹ ಇಲಾಖೆ ಸತ್ತಿದೆ ಎಂದರ್ಥ ಅಲ್ಲವೇ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಮೊನ್ನೆ ಒಬ್ಬ ಬಿಜೆಪಿ ಗೂಂಡಾ @PriyankKharge ಅವರಿಗೆ ಗುಂಡು ಹೊಡೆಯುತ್ತೇನೆ ಎಂದಿದ್ದ, ಇಂದು ಮತ್ತೊಬ್ಬ ಶಾಸಕ ತನ್ವೀರ್ ಸೇಠ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ.
ಜನಪ್ರತಿನಿಧಿಗಳಿಗೇ ಕೊಲೆ ಬೆದರಿಕೆ ಹಾಕಿ ರಾಜಾರೋಷವಾಗಿ ತಿರುಗಿಕೊಂಡಿರಲು ಸರ್ಕಾರ ಬಿಟ್ಟಿದೆ ಎಂದರೆ ಗೃಹ ಇಲಾಖೆ ಸತ್ತಿದೆ ಎಂದರ್ಥ ಅಲ್ಲವೇ @JnanendraAraga ಅವರೇ? pic.twitter.com/kufJBjI2XC
— Karnataka Congress (@INCKarnataka) November 17, 2022
ಬಸವರಾಜ ಬೊಮ್ಮಾಯಿ ಅವರೇ, ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳು ಆಳುತ್ತಿದ್ದಾರೋ? ಆರಗ ಜ್ಞಾನೇಂದ್ರ ಅವರೇ, ಗೃಹ ಇಲಾಖೆಯ ಸಚಿವರಾಗಿ ನೀವೇ ಇದ್ದಿರೋ ಅಥವಾ ಕ್ರಿಮಿನಲ್ಗಳಿಗೆ ವಹಿಸಿಕೊಟ್ಟಿದ್ದೀರೋ? ಜನಪ್ರತಿನಿಧಿಗಳಿಗೇ ಜೀವ ಬೆದರಿಕೆ ಹಾಕುವವರನ್ನು ಸರ್ಕಾರ ಸಾಕಿಕೊಂಡಿದೆ ಎಂದರೆ ಜನಸಾಮಾನ್ಯರು ರಕ್ಷಣೆ ನಿರೀಕ್ಷಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.