ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾತುಂಗೆರೆ ಗ್ರಾಮದಲ್ಲಿ ಶ್ರೀಹುಚ್ಚಮ್ಮ ತಾಯಿ ದೇವಸ್ಥಾನದ ಕಲ್ಯಾಣಿ ಮತ್ತು ಉದ್ಯಾನವನ ಕಾಮಗಾರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಯಾತುಂಗೆರೆ ಗ್ರಾಮದ ಜನರ ಅಪೇಕ್ಷೆಯ ಮೇರೆಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ಹಾಗೂ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ 5 ಲಕ್ಷ ರೂ.ಸೇರಿಸಿ ಒಟ್ಟು 10 ಲಕ್ಷ ರೂ. ವೆಚ್ಚದಲ್ಲಿ ಕಲ್ಯಾಣಿ ಮತ್ತು ಉದ್ಯಾನವನವನ್ನು ನಿರ್ಮಿಸಲಾಗುವುದು ಎಂದರು.
ಗ್ರಾಮ ದೇವತೆ ಹುಚ್ಚಮ್ಮನ ದೇವಸ್ಥಾನ ಭಕ್ತಾದಿಗಳ ಶ್ರದ್ಧಾ ಕೇಂದ್ರವಾಗಿದ್ದು, ಭಕ್ತರಿಗೆ ಅನುಕೂಲವಾಗಲಿ ಎಂದು ಕಲ್ಯಾಣಿ ಮತ್ತು ಉದ್ಯಾನವನ ನಿರ್ಮಾಣ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು
ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್, ಸದಸ್ಯರಾದ ಕೆ.ಎಸ್.ಲೋಕೇಶ್, ಮಾಲತಿ ಸುರೇಶ್, ಕಾಳೇಗೌಡ, ಚೌದ್ರಿ, ಮುಖಂಡರಾದ ಕೆ.ಟಿ.ಪುಟ್ಟಸ್ವಾಮಿ, ಕೆ.ಎಂ. ಬಸವರಾಜ್ ಅಶೋಕ್, ನಗರಸಭಾ ಸದಸ್ಯ ಕುಮಾರ್, ಸಿದ್ದು,ಕಿರಗಂದೂರು ಪ್ರದೀಪ್(ಗದ್ದೇಗೌಡ), ಆಡಿಟರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.