ದಲಿತ ಮುಖಂಡ ಎಂ.ಬಿ.ಶ್ರೀನಿವಾಸ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪಾಂಡವಪುರ ತಾಲೂಕಿನ ಮೇನಾಗರದಲ್ಲಿ ನ.22ರಂದು ಬೆಳಿಗ್ಗೆ 10.30ಗಂಟೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜೀವಧಾರೆ ಟ್ರಸ್ಟ್ ವತಿಯಿಂದ ನಡೆಯುವ ಶಿಬಿರದಲ್ಲಿ ಸುಮಾರು 60 ಮಂದಿ ರಕ್ತದಾನ ಮಾಡುವ ನಿರೀಕ್ಷೆ ಇದೆ, ಈ ಮೂಲಕ ಪ್ರಗತಿಪರ, ಜನಪರ ಹೋರಾಟಗಾರ ಎಂ.ಬಿ.ಶ್ರೀನಿವಾಸ್ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅವರ ಬೆಂಬಲಿಗರು ಮುಂದಾಗಿದ್ದಾರೆ. ಈ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ರಕ್ತದಾನ ಮಾಡುವಂತೆ ಎಂ.ಬಿ.ಶ್ರೀನಿವಾಸ್ ಅವರ ಪುತ್ರ ರಾಹುಲ್ ಮನವಿ ಮಾಡಿದ್ದಾರೆ.