ಮಂಡ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಸುತ್ತಾಡುತ್ತಿರುವ ನನಗೆ ಹಲವಾರು ವಿದ್ಯಾರ್ಥಿನಿಯರನ್ನು ಮಾತನಾಡಿಸಿದಾಗ, ಡಬಲ್ ಡಿಗ್ರಿ ಮಾಡಿಕೊಂಡು ಹತ್ತಾರು ಕಡೆ ಕೆಲಸಕ್ಕೆ ಅಲೆದಾಡಿ, ಒಂದು ಕೆಲಸ ಗಿಟ್ಟಿಸಲಾಗದೆ ಎಷ್ಟೋ ಜನ ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂಬುದು ಗಮನಕ್ಕೆ ಬಂದಿದ್ದು, ಅವರಿಗೆ ಕೆಲಸ ದೊರಕಿಸಿ ಕೊಡಲು ಒಂದು ವೇದಿಕೆ ಕಲ್ಪಿಸಿಕೊಡುವುದಾಗಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಧುಸೂದನ್ ತಿಳಿಸಿದ್ದಾರೆ.
ಇಂತಹ ಅಭ್ಯರ್ಥಿಗಳಿಗೆ ನನ್ನ ಸ್ನೇಹಿತರೊಡಗೂಡಿ ಕೆಲಸ ದೊರಕಿಸಿ ಕೊಡಲು ಗಮನ ಹರಿಸಲಾಗುವುದು, M.com ಮಾಡಿ ಕೆಲಸ ಹುಡುಕುತ್ತಿರುವ ಮಹಿಳಾ ಅಭ್ಯರ್ಥಿಗಳು ತಮ್ಮ ರಸ್ಯೂಂ ಅನ್ನು 9606033447 ಇಲ್ಲಿಗೆ ವಾಟ್ಸಾಪ್ ಮಾಡಿದರೆ ತಮ್ಮ ಕೈಲಾದ ಸಹಾಯ ಮಾಡಲಾಗುವುದು ಎಂದು ಹೆಚ್.ಸಿ.ಮಧುಸೂದನ್ ಅವರು ತಮ್ಮ ಪೇಸ್ಮುಕ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.