Thursday, September 19, 2024

ಪ್ರಾಯೋಗಿಕ ಆವೃತ್ತಿ

ದ್ವೇಷದ ರಿಪಬ್ಲಿಕಿನಲ್ಲಿ…

ದ್ವೇಷದ ರಿಪಬ್ಲಿಕಿನಲ್ಲಿ…

ಅತ್ಯಾಚಾರವೇ ಸಂಸ್ಕಾರವಾದ
ನಾಡಿನಲ್ಲಿ…
ದುಶ್ಯಾಸಾನವೇ ಸುಶಾಸನ…

ಮುರಿದುಬಿದ್ದ ಸೇತುವೆಗಳು
ಕರಕಲಾದ ಮೊಹಲ್ಲಾಗಳು
ಅಮೃತಕಾಲದ ಮಾದರಿಗಳು…
ಅಭಿವೃದ್ಧಿಯ ಸಾಧನಗಳು…

ಇಂತಿಪ್ಪ
ದ್ವೇಷದ ರಿಪಬ್ಲಿಕಿನಲ್ಲಿ
ಪ್ರೀತಿಯ ನಾಗರಿಕತ್ವ ರದ್ದಾಗಿದೆ ..

ಪ್ರಶ್ನಿಸುವ ಪಕ್ಷಕ್ಕೆ
ಗೆಲ್ಲುವ ಅವಕಾಶ
ನಿರಾಕರಿಸಲಾಗಿದೆ…

ತ್ರಿಶುಲದ ಭಿನ್ನ ಮಾದರಿಗಳ
ನಡುವೆ
ಮುಕ್ತ ಆಯ್ಕೆಗೆ ಚುನಾವಣೆ
ನಡೆದಿದೆ…

ತಿರುಕನ ಕನಸಿಗರೇ,

ಸುಗ್ರೀವರನ್ನು, ವಿಭಿಷಣರನು ನೆಚ್ಚಿಕೊಂಡು
ಶಂಭುಕ ವಧೆಗೆ ಹೊರಟ
ರಾಮನನ್ನು ತಡೆಯಬಹುದೇ?

ಹುಲಿವೇಶ ತೊಟ್ಟವರ
ಮತ್ತು ಬಿಡಿಸದೆ
ನರಮೇಧ ನಿಲ್ಲುವುದೇ?

-ಶಿವಸುಂದರ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!