ಮಾರಣಾಂತಿಕ ಕಾಯಿಲೆಯಾದ ಜಿಬಿ ಸಿಂಡ್ರೋಮ್ (G B SYNDROME)ನಿಂದ ನರಳುತ್ತಿರುವ ಮೈಸೂರು ಜಿಲ್ಲೆಯ ವರುಣ ಗ್ರಾಮದ ಪ್ರಮೋದ್ ಎಂ. ಆರ್ಥಿಕ ಸಹಾಯಕ್ಕಾಗಿ ದಾನಿಗಳಲ್ಲಿ ಮನವಿ ಮಾಡಿದ್ದಾರೆ.
ಗ್ರಾಮ ಒನ್ ಅನ್ಲೈನ್ ಸೇವಾ ಕೇಂದ್ರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಜಿಬಿ ಸಿಂಡ್ರೋಮ್ ಕಾಣಿಸಿಕೊಂಡಿದ್ದು, ಇದರ ಪರಿಣಾಮವಾಗಿ 2 ಕಾಲುಗಳ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ.
ಇವರು ಮೈಸೂರಿನ ಕಾವೇರಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕ್ಸಿತೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ. ಇವರ ಸಂಪೂರ್ಣ ಎರಡು ಕಾಲುಗಳು ಚಲನವಲನ ಇಲ್ಲದಂತಾಗಿವೆ. ಇದರ ಚಿಕಿತ್ಸೆಗಾಗಿ ಸುಮಾರು 5 ರಿಂದ 6 ಲಕ್ಷ ರೂಪಾಯಿಗಳು ವೆಚ್ಚವಾಗುತ್ತದೆ ಎಂದು ವೈದ್ಯರು ಹೇಳಿದ್ದು, ರಾಜಕಾರಣಿಗಳು, ಉದ್ಯಮಿಗಳು, ಚಿತ್ರನಟರು ಹಾಗೂ ಅವರ ಅಭಿಮಾನಿಗಳು, ಸಮಾಜಸೇವಕರು, ಸಹೃದಯರು ಹಾಗೂ ಸಾರ್ವಜನಿಕರು, ದಾನಿಗಳು ಉದಾರವಾಗಿ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.
ಹಣದ ಸಹಾಯ ಮಾಡಬಹುದು ಎಷ್ಟಾದರೂ ದಾನ ಮಾಡಬಹುದು. ದಾನಿಗಳು ತಮ್ಮ ಆರ್ಥಿಕ ನೆರವನ್ನು ಪ್ರಮೋದ್ ಎಂ. ಅವರ phonepe / google pay mob : 9019892033 ಇಲ್ಲಿಗೆ ಕಳುಹಿಸಿ ಕೊಡುವಂತೆ ಕೋರಲಾಗಿದೆ.