ಸವರ್ಣೀಯ ಹುಡುಗಿಯೊಂದಿಗೆ ದಲಿತನೋರ್ವ ಮಾತನಾಡಿದ ಎಂಬ ಒಂದೇ ಕಾರಣಕ್ಕೆ 7 ಜನ ಸವರ್ಣೀಯರು ಬೆಲ್ಟ್ಗಳಿಂದ ಮತ್ತು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದು ಎಂದು ಗುಜರಾತಿನ ವಡೋದರದಿಂದ ವರದಿಯಾಗಿದೆ.
In GJ’s Vadodara, a SC youth was brutally thrashed with sticks and belts, and hurled casteist slurs. This is a clear repetition of the Una incident.
Why are Hindu orgs silent? Their visceral hatred towards the SC people is terrible.pic.twitter.com/OZxHBJn6e9
— Mission Ambedkar (@MissionAmbedkar) December 23, 2022
“>
ಪ್ರಕರಣಕ್ಕೆ ಸಂಬಂಧಿಸಿದಂತೆ ಥಳಿಸಿದ ವೀಡಿಯೋ ವೈರಲ್ ಆಗಿದ್ದು, ಅದರ ಆಧಾರದಲ್ಲಿಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಭಾಯ್ಲಿ ಗ್ರಾಮದ ನಿವಾಸಿ ಅಲ್ಪೇಶ್ ಪರ್ಮಾರ್ ಎಂಬ ದಲಿತ ಯುವಕ ವಡೋದರದ ಸೇವಾಸಿ ರಸ್ತೆಯಲ್ಲಿ ಹುಡುಗಿಯೊಂದಿಗೆ ಮಾತನಾಡುತ್ತಿದ್ದಾಗ ಏಳು ಜನರು, ವಿನಾಕಾರಣ ಹಲ್ಲೆ ನಡೆಸಿದ್ದಾರೆ. ಜಾತಿ ನಿಂದನೆ ಮಾಡಿ ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
गुजरात में गुंडाराज !
ऊना कांड के वक्त मोदी जी ने कहा था- “मारना है तो मुझे मारो, मेरे दलित भाईयो को नहीं” लेकिन प्रशासन द्वारा यह सुनिश्चित ही नहीं किया गया की दुबारा इस प्रकार की घटनाएं न घटे। नतीजा-कल वडोदरा जिले में दलित युवक की सरेआम लिंचिंग करने की कोशिश हुई। @dgpgujarat pic.twitter.com/k4LxL87zJN
— Jignesh Mevani (@jigneshmevani80) December 22, 2022
“>
ಅದೇ ಗ್ರಾಮದ ಸವರ್ಣೀಯನೊಬ್ಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಮೆಂಟ್ ಮಾಡಿದ ಏಕೈಕ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ ಅದನ್ನು ವಿಡಿಯೋ ಮಾಡಿ ಎಲ್ಲೆಡೆ ವೈರಲ್ ಮಾಡಿದ್ದಾರೆ. ಈ ಕೃತ್ಯಕ್ಕೆ ನೊಂದ ಕುಟುಂಬದವರು ಧೈರ್ಯ ಮಾಡಿ ಕೇಸು ದಾಖಲಿಸಲು ಮುಂದಾದಾಗಲೂ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಅಲ್ಪೇಶ್ ತಿಳಿಸಿದ್ದಾರೆ.
ಶಾಸಕ ಜಿಗ್ನೇಶ್ ಮೇವಾನಿ ಖಂಡನೆ
ದಲಿತ ಯುವಕನ ಮೇಲಿನ ಅಮಾನುಷ ಹಲ್ಲೆಯನ್ನು ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಖಂಡಿಸಿದ್ದಾರೆ. ʼಉನಾ ಘಟನೆಯ ಸಮಯದಲ್ಲಿ ನೀವು ಕೊಲ್ಲಲು ಬಯಸಿದರೆ ನನ್ನನ್ನು ಕೊಲ್ಲಿ, ನನ್ನ ಸ್ನೇಹಿತರನ್ನಲ್ಲ ಎಂದು ಮೋದೀಜಿ ಹೇಳಿದರು. ಆದರೆ ಇಂತಹ ಅಮಾನವೀಯ ಘಟನೆಗಳು ದೇಶದ ತುಂಬೆಲ್ಲಾ ನಡೆಯುತ್ತಿದ್ದರೂ ತಡೆಯಲು ಮುಂದಾಗಲಿಲ್ಲ. ಅದರ ಫಲಿತಾಂಶವಾಗಿ ಸಾರ್ವಜನಿಕವಾಗಿ ಹತ್ಯೆ ಮಾಡುವ ಪ್ರಯತ್ನ ನಡೆದಿದೆ. ಎಂದು ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ.