ಸಂಕಷ್ಟ ಸಮಯದಲ್ಲಿ ನನಗೆ, ದೇವೇಗೌಡರ ಬೆನ್ನಿಗೆ ಚೂರಿ ಇರಿದವರನ್ನು ನಂಬಬೇಡಿ. ದೇವೇಗೌಡರು ಅವರಿಗೆ ಏನು ಮಾಡಿದ್ದರೂ ಎಂದು ಬೆನ್ನಿಗೆ ಚೂರಿ ಇರಿದರು. ಬೆನ್ನಿಗೆ ಚೂರಿ ಹಾಕಿದವರಿಗೆ ಸರಿಯಾದ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹೆಸರೇಳದೆ ವಾಗ್ದಾಳಿ ನಡೆಸಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ನನಗೆ, ದೇವೇಗೌಡರ ಬೆನ್ನಿಗೆ ಚೂರಿ ಹಾಕಿದವರನ್ನು ನಂಬಬೇಡಿ. ನನ್ನ ಸಂಕಷ್ಟ ಸಮಯದಲ್ಲಿ ನಮ್ಮ ಪಕ್ಷಕ್ಕೆ ಬಂದ ರವೀಂದ್ರ ಶ್ರೀಕಂಠಯ್ಯ ನಮ್ಮ ಕೈ ಹಿಡಿದರು. ರವೀಂದ್ರರಿಗೆ ಬೆನ್ನಿಗೆ ಚೂರಿ ಹಾಕುವ ಬುದ್ಧಿ ಇಲ್ಲ. ಅವರನ್ನು ಗೆಲ್ಲಿಸಿದರೆ ಮಂತ್ರಿ ಮಾಡುವುದಾಗಿ ತಿಳಿಸಿದರು.
ಅರಕೆರೆ ಗ್ರಾಮದ ರಸ್ತೆ ಮಾಡಲು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಬಿಟ್ಟಿರಲಿಲ್ಲ, ಕುತಂತ್ರದ ರಾಜಕಾರಣ ಮಾಡಿಕೊಂಡು ಅಭಿವೃದ್ಧಿಗೆ ತಕರಾರು ಮಾಡ್ತಿದ್ದರು. ಈ ಹಿಂದೆ ಇದ್ದ ಮಹಾನುಭಾವನಿಂದ ಕುತಂತ್ರ ಇತ್ತು. ರವೀಂದ್ರಣ್ಣ ಈ ರಸ್ತೆ ಮಾಡಿಸಿದ್ದು, ಅಭಿವೃದ್ಧಿ ಅಂದ್ರೆ ರವೀಂದ್ರಣ್ಣ. ಕುತಂತ್ರದಿಂದ ಬೆನ್ನಿಗೆ ಚೂರಿ ಹಾಕುವ ಬುದ್ದಿ ಇಲ್ಲ ಎಂದು ರಮೇಶ್ ಬಾಬು ವಿರುದ್ಧ ಹೆಸರೇಳದೆ ಕಿಡಿಕಾರಿದರು.
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ತವರು ಗ್ರಾಮಲ್ಲಿ ಬೃಹತ್ ಗಾತ್ರದ ಭತ್ತ, ಕಬ್ಬಿನ ಹಾರ ಹಾಗೂ ಪುಷ್ಪವೃಷ್ಟಿ ಮಾಡುವ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದರು.