Thursday, September 19, 2024

ಪ್ರಾಯೋಗಿಕ ಆವೃತ್ತಿ

ನಂದಿನಿ ಬ್ರಾಂಡ್ ನಾಶಕ್ಕೆ ಅಮಿತ್ ಶಾ ಪ್ಲಾನ್ : ಡಾ.ಹೆಚ್.ಸಿ.ಮಹದೇವಪ್ಪ

ಗುಜರಾತ್ ನ ಅಮೂಲ್ ಬ್ರಾಂಡ್ ಜೊತೆಗೆ ಕರ್ನಾಟಕ ಲಕ್ಷಾಂತರ ರೈತಾಪಿ ಜನರ ಜೀವನಾಧಾರವಾಗಿರುವ ಕರ್ನಾಟಕದ ನಂದಿನಿ ಬ್ರಾಂಡ್ ಅನ್ನು ವಿಲೀನ ಮಾಡಲು ಕೇಂದ್ರ ಸಚಿವ ಸಂಚು ರೂಪಿಸಿದ್ದಾರೆಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

“>

ಹೈನುಗಾರಿಕೆಯ ಮೂಲಕ ಸಾವಿರಾರು ರೈತ ಕುಟುಂಬಗಳಿಗೆ ಜೀವನಾಧಾರವಾಗಿರುವ ಕರ್ನಾಟಕ ರಾಜ್ಯದ ನಂ.1 ನಂದಿನಿ ಹಾಲಿನ ಘಟಕವನ್ನು ಗುಜರಾತ್ ನ ಅಮುಲ್ ಸಂಸ್ಥೆಯೊಂದಿಗೆ ವಿಲೀನ ಮಾಡುವ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಅವರು ರೈತ ವಿರೋಧಿ ಚಿಂತನೆಯನ್ನು ಹರಿಯ ಬಿಟ್ಟಿದ್ದಾರೆ, ಇದರಿಂದ ನಂದಿನಿ ಬ್ರಾಂಡ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ ಎಂದು ಡಾ.ಹೆಚ್.ಸಿ.ಮಹದೇವಪ್ಪ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬಡ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಅನ್ನು ರದ್ದು ಮಾಡುವುದು, ಪಿಂಚಣಿ ವ್ಯವಸ್ಥೆಯನ್ನು ಹಾಳು ಮಾಡುವುದು, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿತಗೊಳಿಸುವುದರ ಆದಿಯಾಗಿ ಇನ್ನೂ ಹತ್ತು ಹಲವು ರೀತಿಯಲ್ಲಿ ಮನಸೋಚ್ಛೆಯಾಗಿ ವರ್ತಿಸುತ್ತಿರುವ ಬಿಜೆಪಿಗರಿಗೆ ಆಡಳಿತಾತ್ಮಕವಾಗಿ ತರಲೆ ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದು ಈ ಸಾಲಿಗೆ ಇದೀಗ ನಂದಿನಿ ಸಂಸ್ಥೆಯನ್ನು ವಿಲೀನಗೊಳಿಸುವ ಸಂಗತಿಯು ಸೇರ್ಪಡೆಯಾಗಿದೆ.

ವಿಕೇಂದ್ರೀಕರಣದ ಮಹತ್ವ ತಿಳಿಯದೇ ಎಲ್ಲವೂ ಒಬ್ಬರ ಕಪಿ ಮುಷ್ಢಿಯಲ್ಲಿ ಇರಬೇಕೆಂಬ ಸರ್ವಾಧಿಕಾರ ಬಿಜೆಪಿಗರ ಹುಚ್ಚಾಟಗಳಿಗೆ ಎಲ್ಲರೂ ಒಗ್ಗೂಡಿ ಬ್ರೇಕ್ ಹಾಕಬೇಕಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!