ಮದ್ದಿನಮನೆ ನೆರವಿಗರ ಕೂಟದ ಮನವಿಗೆ ಸ್ಪಂದನೆ ನೀಡಿ ಕ್ರಮ ವಹಿಸಿದ ಡಿಎಚ್ಓ ಮದ್ದೂರು ಸರ್ಕಾರಿ ಆಸ್ಪತ್ರೆಗೆ ಚರ್ಮರೋಗ ತಜ್ಞರಾದ ಡಾ.ವಿನೋದ್ ಅವರನ್ನು ನಿಯೊಜನೆ ಮಾಡಿ ಆದೇಶ ಹೊರಡಿಸಲಾಗಿದ್ದು, ಪ್ರತಿ ಮಂಗಳವಾರ ಹಾಗು ಶನಿವಾರದಂದು ಇವರು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವಾ ಡಿಎಚ್ಓ ಡಾ.ಧನಂಜಯ್ ಅವರು ಮದ್ದೂರಿನ ಸರ್ಕಾರಿ ಆಸ್ಪತ್ರೆ ಸುಧಾರಣೆಗಾಗಿ ಕಾರ್ಯ ನಿರ್ವಹಿಸುತಿರುವ ಸ್ವಯಂ ಸೇವಾ ತಂಡ “ಮದ್ದಿನಮನೆ ನೆರವಿಗರ ಕೂಟ” ದ ಸದಸ್ಯರ ಮನವಿ ಮೇರೆಗೆ ಚರ್ಮರೋಗ ತಜ್ಞರ ನಿಯೊಜನೆ ಮಾಡಲಾಗಿದೆ ಎಂದಿದ್ದಾರೆ.
ಕಳೆದ ವಾರವಷ್ಠೇ ಮದ್ದಿನಮನೆ ನೆರವಿಗರ ಕೂಟಕ್ಕೆ ಡಾ ಧನಂಜಯ್ ಅವರು ಚಾಲನೆ ನೀಡಿದ್ದರು. ಈ ವೇಳೆ ಮದ್ದೂರು ಆಸ್ಪತ್ರೆಯ ಅಭಿವೃದ್ಧಿಗಾಗಿ ನಾವು-ನೀವು ಒಟ್ಟಾಗಿ ಶ್ರಮಿಸೋಣ ಎಂದಿದ್ದರು
ಅದರಂತೆ ಸ್ಪಂದನೆ ನೀಡುತ್ತಿರುವುದು ಶ್ಲಾಘನೀಯ ಎಂದಿರುವ ಪುರಸಭೆ ಮಾಜಿ ಅಧ್ಯಕ್ಷರು, ನೆರವಿಗರ ಕೂಟದ ಸದಸ್ಯರು ಆದ ಶೇಖರ್ ಇದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.