ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹಿಸಿ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಜೋಗಿಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಪ್ರತಿ ಟನ್ಗೆ ₹ 4500 ಕೊಡಬೇಕೆಂದು ಬೇಡಿಕೆ ಇಟ್ಟಿರುವ ವಿಚಾರವನ್ನು ನಮ್ಮ ಮಂಡ್ಯ ಜಿಲ್ಲಾ ರೈತ ಘಟಕ ಬೆಂಬಲಿಸುತ್ತದೆ, ರೈತರು ಹೋರಾಟ, ಪ್ರತಿಭಟನೆ ಮಾಡುತ್ತಿರುವುದು, ನಮ್ಮ ಮನಸ್ಸಿಗೆ ನೋವುಂಟಾಗುತ್ತಿದೆ. ಏಕೆಂದರೆ ದೇಶದ ಬೆನ್ನೆಲುಬು ರೈತ ಎಂದು ಕರೆಯುತ್ತಾರೆ, ಆದರೆ ರೈತರ ವಿಚಾರ ಬಂದಾಗ ರೈತರು ಸಾಕಷ್ಟು ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದರು.
ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು ಟನ್ ಕಬ್ಬಿಗೆ ₹ 100 ಹೆಚ್ಚಳ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಕೇಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಸಿ.ಎಚ್.ಜವರೇಗೌಡ, ಜೆ.ಜೆ.ನಿಂಗರಾಜು, ಎಂ.ಎನ್.ಪುಟ್ಟರಾಜು, ಕೃಷ್ಣ ಉಪಸ್ಥಿತರಿದ್ದರು.