ಲಾರಿಯೊಂದು ಕಾರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಕಾರು ಹೋಗಿ ಅಂಗಡಿ – ಮುಂಗಟ್ಟುಗಳಿಗೆ ಡಿಕ್ಕಿ ಹೊಡೆದು ಮೂರ್ನಾಲ್ಕು ಅಂಗಡಿಗಳಿಗೆ ಹಾನಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಮದ್ದೂರು ತಾಲ್ಲೂಕಿನ ಮಲ್ಲನಕುಪ್ಪೆ ಗೇಟ್ ಬಳಿ ನಡೆದಿದೆ.
ಇಂದು ಬೆಳಿಗ್ಗೆ ಮಲ್ಲನಕುಪ್ಪೆ ಗೇಟ್ ಬಳಿ ಸರಕು ತುಂಬಿದ ಲಾರಿ (ಎಪಿ 39 ಟಿಬಿ 0033)ಯೊಂದು ಹಿಂಬದಿಯಿಂದ ಕಾರಿಗೆ ಗುದ್ದಿದ ರಭಸಕ್ಕೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳತ್ತ ನುಗ್ಗಿದ್ದರಿಂದ, ನಾಲ್ಕು ಅಂಗಡಿ ಶೀಟ್ ಗಳು ಮುರಿದು ಬಿದ್ದಿವೆ. ಈ ಘಟನೆಯಲ್ಲಿ ಲಾರಿಯೂ ಉರುಳಿ ಬಿದ್ದಿದೆ, ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಈ ಸಂಬಂಧ ಕೆಸ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.