ಜಮೀನಿನ ಬಳಿ ಹಾಕಿದ್ದ ಹುಲ್ಲಿನಮೆದೆಗೆ ಕಿಡಿಗೇಡಿ ಬೆಂಕಿ ಹಾಕಿದ ಪರಿಣಾಮ 30 ಸಾವಿರ ರೂ ಬೆಲೆಬಾಳುವ ಹುಲ್ಲಿನ ಮೆದೆ ಸಂಪೂರ್ಣ ಸುಟ್ಟು ಭಷ್ಮವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿಯಲ್ಲಿ ನಡೆದಿದೆ.
ರೈತ ರೇವಣ್ಣ ಎಂಬುವವರು ಸಾಕಲಾಗಿದ್ದ ರಾಸುಗಳಿಗಾಗಿ ಬೇರೆ ಗ್ರಾಮದಿಂದ 30 ಸಾವಿರ ರೂ. ಹಣವನ್ನು ಕೊಟ್ಟು, ಎರಡು ಟ್ರಾಕ್ಟರ್ ಹುಲ್ಲನ್ನು ಖರೀದಿಸಿ ಮೆದೆ ಹಾಕಿಸಿದ್ದರು. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಹುಲ್ಲಿನ ಮೆದೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ರೈತನ ಗೋಳು ಎಳತೀರದ್ದಾಗಿತ್ತು.