Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಟ್ಟೆ ಒಗೆಯಲು ಹೋದ ಇಬ್ಬರು ಮಹಿಳೆಯರು ಕೆರೆ ಪಾಲು

ಬಟ್ಟೆ ಒಗೆಯಲು ಕೆರೆಗೆ ತೆರಳಿದ ಇಬ್ಬರು ಮಹಿಳೆಯರು ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಮದ್ದೂರು ತಾಲ್ಲೂಕಿನ ಅಲಂ ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಶಿವಣ್ಣ ಎಂಬುವವರ ಪತ್ನಿ ಸರೋಜ (ದೊಡ್ಡತಾಯಮ್ಮ)35 ಹಾಗೂ ಸ್ವಾಮಿ ಎಂಬುವವರ ಪತ್ನಿ ಶಾರದ (32) ಸಾವಿಗೀಡಾದವರು.

ಶನಿವಾರ ಮಧ್ಯಾಹ್ನ ಬಟ್ಟೆ ಒಗೆಯಲು ಕೆರೆ ಬಳಿ ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಈ ಮಹಿಳೆಯರು ಸಾವನ್ನಪ್ಪಿದ್ದಾರೆ. ಗ್ರಾಮದ ಕೆರೆಯೂ ತುಂಬ ಕಡಿದಾಗಿದ್ದು, ಆಳವಾಗಿಯೂ ಇದೆ, ಇಲ್ಲಿಗೆ ಬಟ್ಟೆ ಒಗೆಯಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಮದ್ದೂರು ತಾಲ್ಲೂಕಿನ ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವಗಳನ್ನು ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಇಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!