ಗೋ ಹತ್ಯೆ ನಿಷೇಧ ಕಾಯ್ದೆ ಹೆಸರಿನಲ್ಲಿ ಪುನೀತ್ ಕೆರೆಹಳ್ಳಿ ಸೇರಿದಂತೆ ಆತನ ಸಹಚರರು 2 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಹಣ ಕೊಡದಿರುವ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕನಕಪುರ ತಾಲ್ಲೂಕಿನ ಸಾತನೂರು ಬಳಿ ಕಳೆದ ರಾತ್ರಿ 12.30 ನಡೆದಿದೆ.
ಈ ಘಟನೆಯಲ್ಲಿ ಮಂಡ್ಯನಗರದ ನಿವಾಸಿ ಇದ್ರೀಸ್ ಪಾಷಾ (35) ಕೊಲೆಯಾದ ವ್ಯಕ್ತಿ. ಈ ಘಟನೆಗೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಮೇಲೆ ಸಾತನೂರು ಪೊಲೀಸ್ ರಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದ್ರೀಸ್ ಪಾಷಾ ಕೊಲೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಜಾನುವಾರು ಸಾಗಣೆ ವಾಹನದ ಚಾಲಕನನ್ನು ಕೊಲೆಗೈದ ಪುಡಾರಿ ಬಿಜೆಪಿ ನಾಯಕರೊಂದಿಗೆ ಖಾಸಾ ಸಂಬಂಧ ಹೊಂದಿದ್ದಾನೆ ಎಂದು ಟ್ಟೀಟ್ ಮಾಡಿ, ಪುಡಾರಿ ಪುನೀತ್ ಕೆರೆಹಳ್ಳಿ ಬಿಜೆಪಿ ನಾಯಕರೊಂದಿಗಿರುವ ಪೋಟೊಗಳನ್ನು ತನ್ನ ಟ್ವೀಟರ್ ಖಾತೆಯಲ್ಲಿಯನ್ನು ಹಂಚಿಕೊಂಡಿದೆ.
ಇದನ್ನೂ ಓದಿ : ಪುನೀತ್ ಕೆರೆಹಳ್ಳಿಯಿಂದ ಹಣಕ್ಕೆ ಡಿಮ್ಯಾಂಡ್ : ಗೋ ರಕ್ಷಣೆ ನೆಪದಲ್ಲಿ ಮಂಡ್ಯದ ಯುವಕ ಕೊಲೆ ?
ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಎಬ್ಬಿಸಲು ಈ ಕೊಲೆಗೆ ನಾಯಕರೇ ಸುಪಾರಿ ನೀಡಿದ್ದರೇ? ಇದು ಬಿಜೆಪಿ ಪ್ರಾಯೋಜಿತ ಕೊಲೆಯೇ? ಪೋಲಿಸರು ಆತನೊಂದಿಗೆ ನಿಕಟ ಸಂಬಂಧವಿರುವ ಬಿಜೆಪಿ ನಾಯಕರನ್ನೂ ವಿಚಾರಣೆಗೆ ಒಳಪಡಿಸಬೇಕು. ಎಂದು ಪ್ರಶ್ನಿಸಿದೆ.
ಜಾನುವಾರು ಸಾಗಣೆ ವಾಹನದ ಚಾಲಕನನ್ನು ಕೊಲೆಗೈದ ಪುಡಾರಿ ಬಿಜೆಪಿ ನಾಯಕರೊಂದಿಗೆ ಖಾಸಾ ಸಂಬಂಧ ಹೊಂದಿದ್ದಾನೆ.
ಚುನಾವಣೆಯ ಹಿನ್ನೆಲೆಯಲ್ಲಿ ಗಲಭೆ ಎಬ್ಬಿಸಲು ಈ ಕೊಲೆಗೆ @BJP4Karnataka ನಾಯಕರೇ ಸುಪಾರಿ ನೀಡಿದ್ದರೇ?
ಇದು ಬಿಜೆಪಿ ಪ್ರಾಯೋಜಿತ ಕೊಲೆಯೇ?ಪೋಲಿಸರು ಆತನೊಂದಿಗೆ ನಿಕಟ ಸಂಬಂಧವಿರುವ ಬಿಜೆಪಿ ನಾಯಕರನ್ನೂ ವಿಚಾರಣೆಗೆ ಒಳಪಡಿಸಬೇಕು. pic.twitter.com/kXo4j6MbMs
— Karnataka Congress (@INCKarnataka) April 2, 2023
“>ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ಟೀಟ್ ಮಾಡಿ ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು. 3/4#LawAndOrder
— Siddaramaiah (@siddaramaiah) April 2, 2023
“>